Webdunia - Bharat's app for daily news and videos

Install App

IPL 2025 RCB vs PBKS: ಬೆಂಗಳೂರು ನಿಮ್ಗೆ ಬಿಟ್ಟುಕೊಟ್ವಿ, ಪಂಜಾಬ್ ನಲ್ಲಿ ಬಿಡೋ ಮಾತೇ ಇಲ್ಲ

Krishnaveni K
ಶನಿವಾರ, 19 ಏಪ್ರಿಲ್ 2025 (18:00 IST)
ಚಂಢೀಗಢ: ಐಪಿಎಲ್ 2025 ರಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ಪಂಜಾಬ್ ವಿರುದ್ಧ ಸೋತ ಹತಾಶೆ ಆರ್ ಸಿಬಿಯನ್ನು ಇನ್ನೂ ಮರೆಸಿಲ್ಲ. ಆಗಲೇ ನಾಳೆ ಪಂಜಾಬ್ ವಿರುದ್ಧ ಮತ್ತೊಂದು ಪಂದ್ಯಕ್ಕೆ ರೆಡಿಯಾಗಿದೆ. ಬೆಂಗಳೂರಲ್ಲೇನೋ ನಿಮಗೆ ಪಂದ್ಯ ಬಿಟ್ಟುಕೊಟ್ವಿ, ಪಂಜಾಬ್ ನಲ್ಲಿ ಬಿಡೋ ಮಾತೇ ಇಲ್ಲ ಅಂತಿದ್ದಾರೆ ಫ್ಯಾನ್ಸ್.

ಆರ್ ಸಿಬಿ ಗೆಲ್ಲಲಿ ಸೋಲಲಿ, ಅಭಿಮಾನಿಗಳು ಯಾವತ್ತೂ ತಮ್ಮ ತಂಡವನ್ನು ಬಿಟ್ಟುಕೊಡಲ್ಲ. ಚಿನ್ನಸ್ವಾಮಿ ಮೈದಾನವಂತೂ ಈ ಬಾರಿ ಬೆಂಗಳೂರು ಪಾಲಿಗೆ ಶಾಪವಾಗಿದೆ. ಇದುವರೆಗೆ ಆಡಿದ ಒಂದೇ ಒಂದು ಪಂದ್ಯದಲ್ಲಿ ಟಾಸ್ ಕೂಡಾ ಗೆದ್ದಿಲ್ಲ.

ಹೀಗಾಗಿ ತವರಿನ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಅದಕ್ಕೆ ತಕ್ಕಂತೆ ನಿನ್ನೆ ಪಂದ್ಯದ ಬಳಿಕ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಪ್ರೇಕ್ಷಕರತ್ತ ತಿರುಗಿ ಸೌಂಡ್ ಕೇಳಿಸ್ತಿಲ್ಲ ಎಂದು ಸನ್ನೆ ಮಾಡಿ ಕುಹುಕ ಮಾಡಿದ್ದರು.

ಹೀಗಾಗಿ ಅಭಿಮಾನಿಗಳು ನಿಮ್ಮ ತವರಿನಲ್ಲೇ ನಮ್ಮ ತಂಡ ನಿಮ್ಮನ್ನು ಸೋಲಿಸುತ್ತೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸವಾಲು ಹಾಕಿದ್ದಾರೆ. ಆರ್ ಸಿಬಿ ಇದುವರೆಗೆ ಎಲ್ಲಾ ಪಂದ್ಯಗಳಲ್ಲಿ ತವರಿನಲ್ಲಿ ಮಾತ್ರ ದುರ್ಬಲ. ಆದರೆ ಹೊರಗಿನ ಪಂದ್ಯಗಳಲ್ಲಿ ಪ್ರಬಲ ತಂಡಗಳನ್ನೂ ಹೊಸಕಿ ಹಾಕಿದೆ. ಹೀಗಾಗಿ ಬೆಂಗಳೂರಲ್ಲಿ ಬಿಟ್ಟುಕೊಟ್ಟಿದ್ದೇವೆ, ಪಂಜಾಬ್ ನಲ್ಲಿ ಬಿಡೋ ಮಾತೇ ಇಲ್ಲ ಅಂತಿದ್ದಾರೆ ಫ್ಯಾನ್ಸ್.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

IND vs ENG: ಇಷ್ಟಕ್ಕಾದ್ರೂ ಕನ್ನಡಿಗ ಕರುಣ್ ನಾಯರ್ ತಂಡದಲ್ಲಿರಬೇಕು ಎಂದ ಫ್ಯಾನ್ಸ್

ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ

IND vs ENG: ಒಂದೇ ಓವರ್ ನಲ್ಲಿ 23 ರನ್, ಹಿಗ್ಗಾಮುಗ್ಗಾ ಟ್ರೋಲ್ ಆದ ಪ್ರಸಿದ್ಧ ಕೃಷ್ಣ

ಮುಂದಿನ ಸುದ್ದಿ
Show comments