Webdunia - Bharat's app for daily news and videos

Install App

ಐಪಿಎಲ್ 2024: ಕೊಹ್ಲಿ ಬಳಿಕ, ಧೋನಿ ವಿರುದ್ಧವೂ ದುಷ್ಮನಿ ಮರೆತು ತಬ್ಬಿಕೊಂಡ ಗೌತಮ್ ಗಂಭೀರ್

Krishnaveni K
ಮಂಗಳವಾರ, 9 ಏಪ್ರಿಲ್ 2024 (10:26 IST)
Photo Courtesy: Twitter
ಚೆನ್ನೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸದಾ ತಮ್ಮ ಸಂದರ್ಶನಗಳಲ್ಲಿ ಧೋನಿ ಬಗ್ಗೆ ಕಿಡಿ ಕಾರುತ್ತಿರುತ್ತಾರೆ. ಆದರೆ ನಿನ್ನೆಯ ಚೆನ್ನೈ ಸೂಪರ್ ಕಿಂಗ್ಸ್  ವಿರುದ್ಧದ ಪಂದ್ಯದ ಬಳಿಕ ಕೆಕೆಆರ್ ಮೆಂಟರ್ ಗಂಭೀರ್ ಧೋನಿ ಜೊತೆ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

2011 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಗೆಲುವಿಗೆ ಧೋನಿ ಒಬ್ಬರೇ ಕಾರಣರಲ್ಲ ಎಂದು ಗಂಭೀರ್ ಪದೇ ಪದೇ ಕಿಡಿ ಕಾರುತ್ತಲೇ ಇದ್ದರು. ಆದರೆ ಚೆನ್ನೈ ವಿರುದ್ಧದ ಪಂದ್ಯಕ್ಕೆ ಮುನ್ನ ಗಂಭೀರ್, ಧೋನಿ ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ ಎಂದು ಹೊಗಳಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು.

ಇದು ಇಷ್ಟಕ್ಕೇ ನಿಂತಿಲ್ಲ. ನಿನ್ನೆಯ ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಲು ಬಂದಾಗ ಗಂಭೀರ್, ಎದುರಾಳಿ ನಾಯಕ ಧೋನಿಯನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ.

ಗಂಭೀರ್ ಗೆ ಮೈದಾನದಲ್ಲಿ ಮತ್ತೊಬ್ಬ ಎದುರಾಳಿ ಎಂದರೆ ವಿರಾಟ್ ಕೊಹ್ಲಿ. ಇಬ್ಬರ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಕಳೆದ ಆರ್ ಸಿಬಿ ವಿರುದ್ಧದ ಪಂದ್ಯದ ಬಳಿಕ ಗಂಭೀರ್ ತಾವೇ ಮುಂದಾಗಿ ಕೊಹ್ಲಿಯನ್ನು ತಬ್ಬಿಕೊಂಡು ಮಾತನಾಡಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಮೂಲಕ ತಾವು ಈ ಬಾರಿ ಕೂಲ್ ಆಗಿರುವುದಾಗಿ ಸಂದೇಶ ರವಾನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ–ಇಂಗ್ಲೆಂಡ್‌ ಟೆಸ್ಟ್‌: ದಾಖಲೆ ಬರೆದ ಕೆಲವೇ ಕ್ಷಣದಲ್ಲಿ ಗಾಯಗೊಂಡ ಮೈದಾನ ತೆರೆದ ರಿಷಭ್‌ ಪಂತ್‌

IND vs ENG: ಇಂಗ್ಲೆಂಡ್ ನೆಲದಲ್ಲಿ ದಾಖಲೆ ಮಾಡಿದ ಕೆಎಲ್ ರಾಹುಲ್

END vs IND Test: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗಿಲ್ ಪಡೆ, ತಂಡದಲ್ಲಿ ಮಹತ್ವದ ಬದಲಾವಣೆ

IND vs ENG: ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದ ಯುವ ಬೌಲರ್ ಅಂಶುಲ್ ಕಾಂಬೋಜ್ ಯಾರು ಗೊತ್ತಾ

ತನಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯುವ ಆಟಗಾರ್ತಿಗೆ ನೀಡಿದ ಹರ್ಮನ್ ಪ್ರೀತ್ ಕೌರ್: ವಿಡಿಯೋ

ಮುಂದಿನ ಸುದ್ದಿ
Show comments