IPL 2024: ಧೋನಿ ಕೂಗು ಕೇಳಲಾರೆ ಎಂದು ಕಿವಿ ಮುಚ್ಚಿಕೊಂಡ ಆಂಡ್ರೆ ರಸೆಲ್

Krishnaveni K
ಮಂಗಳವಾರ, 9 ಏಪ್ರಿಲ್ 2024 (12:24 IST)
Photo Courtesy: Twitter
ಚೆನ್ನೈ: ಸಿಎಸ್ ಕೆ ಮಾಜಿ ನಾಯಕ ಎಂಎಸ್ ಧೋನಿ ಕ್ರೀಸ್ ಗೆ ಬಂದರೆ ಅಭಿಮಾನಿಗಳ ಅಬ್ಬರ ಜೋರಾಗಿರುತ್ತದೆ. ಇದೇ ರೀತಿ ನಿನ್ನೆಯ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಧೋನಿ ಕ್ರೀಸ್ ಗೆ ಬಂದಾಗ ಅಭಿಮಾನಿಗಳ ಕೂಗು ಮೇರೆ ಮೀರಿದೆ.

ಆದರೆ ಈ ವೇಳೆ ಕೆಕೆಆರ್ ತಂಡದ ಆಟಗಾರ ಆಂಡ್ರೆ ರಸೆಲ್ ಕಿವಿ ಮುಚ್ಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧೋನಿ ಅಭಿಮಾನಿಗಳ ಅಬ್ಬರ ತಾಳಲಾರದೇ ರಸೆಲ್ ಕಿವಿ ಮುಚ್ಚಿಕೊಂಡಿದ್ದು ಇದಕ್ಕೆ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿದೆ.

ಶಿವಂ ದುಬೆ ವಿಕೆಟ್ ಬಿದ್ದಾಗ ಧೋನಿ ಕ್ರೀಸ್ ಗೆ ಬಂದಿದ್ದರು. ಈ ವೇಳೆ ಚಿಪಾಕ್ ಮೈದಾನದಲ್ಲಿ ಅಭಿಮಾನಿಗಳ ಕೂಗು ಮೇರೆ ಮೀರಿತ್ತು. ಧೋನಿ ಹೆಸರೆತ್ತಿ ಜೋರಾಗಿ ಅಬ್ಬರಿಸುತ್ತಿದ್ದರು. ಇದರಿಂದ ಕೊಂಚ ಕಿರಿ ಕಿರಿಗೊಳಗಾದಂತೆ ಕಂಡುಬಂದ ರಸೆಲ್ ಕಿವಿ ಮುಚ್ಚಿಕೊಂಡರು.

ಚೆನ್ನೈ ಎಂದರೆ ಧೋನಿಗೆ ಎರಡನೇ ತವರಿದ್ದಂತೆ. ತಲಾ ಎಂದೇ ಧೋನಿಯನ್ನು ಗೌರವಿಸುತ್ತಾರೆ. ಹೀಗಾಗಿ ಇಲ್ಲಿ ಧೋನಿ ಆಡಲು ಬಂದರೆ ಅಭಿಮಾನಿಗಳ ದಂಡೇ ಅವರನ್ನು ಚಿಯರ್ ಅಪ್ ಮಾಡಲು ಹರಿದುಬರುತ್ತದೆ. ಅದಕ್ಕೆ ಈ ಪಂದ್ಯ ಮತ್ತೊಮ್ಮೆ ಸಾಕ್ಷಿಯಾಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments