INDw vs NZw: ತನ್ನ ಮೇಲಿದ್ದ ಅಪವಾದ ತೊಡೆದು ಹಾಕಿದ ಸ್ಮೃತಿ ಮಂಧಾನಾ

Krishnaveni K
ಬುಧವಾರ, 30 ಅಕ್ಟೋಬರ್ 2024 (10:13 IST)
ಅಹ್ಮದಾಬಾದ್: ತಕ್ಕ ಸಮಯದಲ್ಲೇ ಕೈ ಕೊಡ್ತಾರೆ, ಬೇಕಿದ್ದ ಪಂದ್ಯದಲ್ಲಿ ಆಡಲ್ಲ ಮೇಕಪ್ ಗೆ ಮಾತ್ರ ಲಾಯಕ್ಕು ಎಂದೆಲ್ಲಾ ಅಪವಾದ ಹೊತ್ತುಕೊಂಡಿದ್ದ ಸ್ಮೃತಿ ಮಂಧಾನಾ ನಿನ್ನೆಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ನಿವಾಳಿಸಿದರು.

ಎರಡೂ ತಂಡಗಳು ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದ್ದರಿಂದ ನಿನ್ನೆಯ ಪಂದ್ಯಕ್ಕೆ ಫೈನಲ್ ಕಳೆ ಬಂದಿತ್ತು. ನಿನ್ನೆಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಮೃತಿ ಮಂಧಾನಾ ತಕ್ಕ ಸಮಯದಲ್ಲೇ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಇದರಿಂದಾಗಿ ಭಾರತ 6 ವಿಕೆಟ್ ಗಳ ಗೆಲುವು ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು.

ರನ್ ಚೇಸಿಂಗ್ ಮಾಡುವಾಗ ಭಾರತ ತಂಡಕ್ಕೆ ಸ್ಮೃತಿ ಮತ್ತು ಹರ್ಮನ್ ರಂತಹ ಅನುಭವಿಗಳ ಸಾಥ್ ಬೇಕಾಗಿತ್ತು. ನಿನ್ನೆಯ ಪಂದ್ಯದಲ್ಲಿ ಸ್ಮೃತಿ 100 ರನ್ ಗಳಿಸಿದರೆ ಹರ್ಮನ್ ಅಜೇಯ 59 ರನ್ ಗಳಿಸಿದರು. ಈ ಮೂಲಕ ಇತ್ತೀಚೆಗೆ ನಡೆದಿದ್ದ ಟಿ20 ವಿಶ್ವಕಪ್ ನ ಲೀಗ್ ಪಂದ್ಯದಲ್ಲಿ ಕಂಡಿದ್ದ ಸೋಲಿಗೆ ಸೇಡು ತೀರಿಸಿಕೊಂಡರು.

ನಿನ್ನೆಯ ಪಂದ್ಯದಲ್ಲಿ ಒಟ್ಟು 122 ಎಸೆತ ಎದುರಿಸಿದ ಸ್ಮೃತಿ 10 ಬೌಂಡರಿಗಳೊಂದಿಗೆ 100 ರನ್ ಗಳಿಸಿ ಬೌಲ್ಡ್ ಔಟ್ ಆದರು. ತಂಡದ ಗೆಲುವಿಗೆ ಇನ್ನು ನಾಲ್ಕು ರನ್ ಇದೆ ಎಂದಾಗ ಅವರು ಔಟಾಗಿದ್ದಾರೆ. ಅಷ್ಟರವರೆಗೂ ತಂಡಕ್ಕೆ ಆಧಾರವಾಗಿ ನಿಂತರು. ಈ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ICC Rankings: ಅಗ್ರಸ್ಥಾನ ಕಳೆದುಕೊಂಡ ಸ್ಮೃತಿ ಮಂಧಾನ, ಅಗ್ರ 10ರ ಪಟ್ಟಿಗೆ ಲಗ್ಗೆಯಿಟ್ಟ ಜೆಮಿಮಾ

ಐಸಿಸಿ ವಿಶ್ವಕಪ್‌ ತಂಡಕ್ಕೆ ಲಾರಾ ವೋಲ್ವಾರ್ಟ್‌ ಸಾರಥ್ಯ: ಕಪ್‌ ಗೆದ್ದರೂ ಹರ್ಮನ್‌ಗೆ ಸಿಗದ ಚಾನ್ಸ್‌

ಮುಟ್ಟಾದಾಗ ಮಹಿಳಾ ಕ್ರಿಕೆಟಿಗರು ಏನು ಮಾಡ್ತಾರೆ: ಶಾಕಿಂಗ್ ವಿಚಾರ ಹೇಳಿದ ಜೆಮಿಮಾ ರೊಡ್ರಿಗಸ್

ಪುರುಷರಿಗೊಂದು ಮಹಿಳೆಯರಿಗೊಂದು ನ್ಯಾಯನಾ.. ಬಿಸಿಸಿಐ ಮಾಡಿದ್ದು ಸರಿಯಿಲ್ಲ ಫ್ಯಾನ್ಸ್ ಆಕ್ರೋಶ

ಟ್ರೋಫಿ ಸ್ವೀಕರಿಸಲು ಬಂದ ಹರ್ಮನ್ ಪ್ರೀತ್ ಈ ನಡೆಯನ್ನು ಗೌರವಯುತವಾಗಿ ಬೇಡವೆಂದ ಜಯ್‌ ಶಾ

ಮುಂದಿನ ಸುದ್ದಿ
Show comments