Publish Date: Thu, 27 Aug 2026 (14:38 IST)
Updated Date: Thu, 27 Aug 2026 (14:40 IST)
ಕೊಲಂಬೊ: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಪಡೆಯಲು ಹೆಣಗಾಡುತ್ತಿದ್ದ ವೇಳೆಯಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ನಡೆಸಿದ ಸಣ್ಣ 'ಮ್ಯಾಜಿಕ್' ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಮೊದಲ ಸೆಷನ್ನಲ್ಲಿ ಸತತವಾಗಿ ಬೌಲಿಂಗ್ ಮಾಡಿದರೂ ಭಾರತೀಯ ಬೌಲರ್ಗಳಿಗೆ ವಿಕೆಟ್ ಮುರಿಯಲು ಸಾಧ್ಯವಾಗಿರಲಿಲ್ಲ. ಶ್ರೀಲಂಕಾ ತಂಡ ಗಟ್ಟಿಯಾಗಿ ನೆಲೆಯೂರಿತ್ತು. ಈ ವೇಳೆ ವಿಕೆಟ್ ಬರದೆ ಕಂಗೆಟ್ಟಿದ್ದ ಸಿರಾಜ್, ವಿಕೆಟ್ಗಳ ಬಳಿಗೆ ತೆರಳಿ ನಾನ್-ಸ್ಟ್ರೈಕರ್ನಲ್ಲಿದ್ದ ಬೇಲ್ಸ್ಗಳ ಸ್ಥಾನವನ್ನು ಅದಲು-ಬದಲು ಮಾಡಿದರು.
ವಿಕ್ರಮಾರ್ಕನಂತಿದ್ದ ಈ ತಂತ್ರ ಹೂಡಿದ ಮರು ಎಸೆತದಲ್ಲೇ ಪವಾಡ ಸಂಭವಿಸಿತು! ರವೀಂದ್ರ ಜಡೇಜಾ ಎಸೆದ ಮುಂದಿನ ಎಸೆತದಲ್ಲೇ ಶ್ರೀಲಂಕಾದ ಪ್ರಭಾತ್ ಜಯಸೂರ್ಯ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
ಸಿರಾಜ್ ಬೇಲ್ಸ್ ಬದಲಿಸಿದ ತಕ್ಷಣವೇ ವಿಕೆಟ್ ಬಿದ್ದ ಈ ಕ್ಷಣ ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, "ಸಿರಾಜ್ ಮ್ಯಾಜಿಕ್ ವರ್ಕ್ ಆಯ್ತು" ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರು ಕೂಡ ಈ ಘಟನೆಯಿಂದ ನಗೆಗಡಲಲ್ಲಿ ತೇಲಿದರು. ಈ ಸನ್ನಿವೇಶವು ಪ್ರಸ್ತುತ ಪಂದ್ಯದ ಅತಿ ದೊಡ್ಡ ಟಾಕಿಂಗ್ ಪಾಯಿಂಟ್ ಆಗಿ ಹೊರಹೊಮ್ಮಿದೆ. ಇತ್ತೀಚೆಗಿನ ವರದಿ ಬಂದಾಗ ಲಂಕಾ 8 ವಿಕೆಟ್ ಕಳೆದುಕೊಂಡು 368 ರನ್ ಗಳಿಸಿದ್ದು 155 ರನ್ ಗಳ ಮುನ್ನಡೆ ಸಾಧಿಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ