Webdunia - Bharat's app for daily news and videos

Install App

ಕಳೆಗುಂದಿದ್ದ ಕುಲ್-ಚಾ ಜೋಡಿಗೆ ರಾಹುಲ್ ದ್ರಾವಿಡ್ ಬಲ ತುಂಬಿದ್ದು ಹೇಗೆ?

Webdunia
ಬುಧವಾರ, 21 ಜುಲೈ 2021 (11:18 IST)
ಕೊಲೊಂಬೋ: ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಬಳಿಕ ಟೀಂ ಇಂಡಿಯಾಗೆ ಕುಲ್-ಚಾ ಜೋಡಿ ಎಂದೇ ಕರೆಯಿಸಿಕೊಳ್ಳುವ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರೇ ಸೀಮಿತ ಓವರ್ ಗಳ ಖಾಯಂ ಸ್ಪಿನ್ನರ್ ಗಳು ಎಂಬ ಕಾಲವಿತ್ತು.


ಆದರೆ ಧೋನಿ ತಂಡದಿಂದ ನಿವೃತ್ತಿಯಾದ ಬಳಿಕ ಈ ಸ್ಪಿನ್ನರ್ ಗಳು ಮಾರ್ಗದರ್ಶನದ ಕೊರತೆಯಿಂದ ಕಳೆಗುಂದಿದರು ಎಂದರೆ ತಪ್ಪಾಗಲಾರದು. ಕುಲದೀಪ್ ಯಾದವ್ ಅಪರೂಪಕ್ಕೆ ತಂಡಕ್ಕೆ ಆಯ್ಕೆಯಾದರೆ, ಯಜುವೇಂದ್ರ ಚಾಹಲ್ ಆಡುವ ಬಳಗದಲ್ಲಿದ್ದರೂ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯದಲ್ಲಿ ಯುವ ಸ್ಪಿನ್ನರ್ ಗಳನ್ನು ಆಶ‍್ರಯಿಸಿತ್ತು.

ಆದರೆ ಈಗ ಶ್ರೀಲಂಕಾ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿ ಬಂದ ಮೇಲೆ ಇಬ್ಬರು ಆಟಗಾರರ ಪರಿಸ್ಥಿತಿ ಬದಲಾಗಿದೆ. ಇಬ್ಬರೂ ಮತ್ತೆ ಜೋಡಿಯಾಗಿ ಎದುರಾಳಿಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಮತ್ತೆ ತಮ್ಮ ಹಳೆಯ ವೈಭವಕ್ಕೆ ಮರಳುವ ಸೂಚನೆ ನೀಡಿದ್ದಾರೆ. ಇಬ್ಬರೂ ತಮಗೆ ದ್ರಾವಿಡ್ ನೀಡಿದ ಸ್ಪೂರ್ತಿ ನೆನೆಸಿಕೊಂಡಿದ್ದಾರೆ. ಲಂಕಾಗೆ ಕಾಲಿಟ್ಟಾಗಿನಿಂದ ದ್ರಾವಿಡ್ ಇಬ್ಬರಿಗೂ ಸಾಕಷ್ಟು ಸಲಹೆ ನೀಡಿದ್ದಾರೆ. ಇದೇ ಇಬ್ಬರಿಗೂ ಈಗ ಫಾರ್ಮ್ ಕಂಡುಕೊಳ್ಳಲು ಸಹಾಯವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ನೀವೇ ಕರೆಸಿ ಜಾತ್ರೆ ಮಾಡಿ ಈಗ ವಿರಾಟ್ ಕೊಹ್ಲಿ ಮೇಲೆ ಯಾಕೆ ಕೇಸ್ ಹಾಕ್ತೀರಿ

Vijay Mallya: ನಾನೇನಾದ್ರೂ ಆರ್ ಸಿಬಿಯಲ್ಲಿ ಇದ್ದಿದ್ರೆ ಕೆಎಲ್ ರಾಹುಲ್..: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ

Arrest Kohli: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿ ಹ್ಯಾಶ್‌ಟ್ಯಾಗ್‌

Bengaluru stampede: ಮೊನ್ನೆಯಷ್ಟೇ ಕೊಹ್ಲಿ ಜೊತೆ ಸುತ್ತಾಟ, ಇಂದು ಪೊಲೀಸರ ಜೊತೆ ಅಲೆದಾಟ

Bengaluru Stampede: ಮೃತರ ಕುಟುಂಬಗಳಿಗೆ ಆರ್‌ಸಿಬಿ ತಲಾ ₹1ಕೋಟಿ ಪರಿಹಾರ ನೀಡಲು ಹೆಬ್ಬಾಳಕರ ಒತ್ತಾಯ

ಮುಂದಿನ ಸುದ್ದಿ
Show comments