Select Your Language

Notifications

webdunia
webdunia
webdunia
webdunia

ದ್ರಾವಿಡ್ ಹೇಳಿದ ಆ ಮಾತೇ ದೀಪಕ್ ಚಹರ್ ಗೆಲುವಿನ ಇನಿಂಗ್ಸ್ ಗೆ ಕಾರಣವಾಯ್ತು!

ದ್ರಾವಿಡ್ ಹೇಳಿದ ಆ ಮಾತೇ ದೀಪಕ್ ಚಹರ್ ಗೆಲುವಿನ ಇನಿಂಗ್ಸ್ ಗೆ ಕಾರಣವಾಯ್ತು!
ಕೊಲೊಂಬೊ , ಬುಧವಾರ, 21 ಜುಲೈ 2021 (09:04 IST)
ಕೊಲೊಂಬೊ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದ ಗೆಲುವಿನ ರೂವಾರಿ ದೀಪಕ್ ಚಹರ್ ತಾವು ಬ್ಯಾಟಿಂಗ್ ಗೆ ಇಳಿಯುವ ಮೊದಲು ಕೋಚ್ ರಾಹುಲ್ ದ್ರಾವಿಡ್ ಹೇಳಿದ ಆ ಮಾತೇನೆಂದು ಬಹಿರಂಗಪಡಿಸಿದ್ದಾರೆ.

Photo Courtesy: Google

ಇನ್ನೇನು ಸೋಲುತ್ತಿದ್ದ ಪಂದ್ಯವನ್ನು ದೀಪಕ್ ಚಹರ್ ತಾಳ್ಮೆಯ ಆಟವಾಡಿ ಗೆಲ್ಲಿಸಿದ್ದಕ್ಕೆ ದ್ರಾವಿಡ್ ನೀಡಿದ ಸಲಹೆ ಕಾರಣ ಎಂದು ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿರುವ ದೀಪಕ್ ಚಹರ್ ‘ರಾಹುಲ್ ಸರ್ ನನ್ನಲ್ಲಿ ಪ್ರತೀ ಚೆಂಡನ್ನೂ ಆಡಲು ಹೇಳಿದರು.  ನಾನು ಅವರು ಕೋಚ್ ಆಗಿ ಭಾರತ ಎ ತಂಡದ ಪರ ಆಡಿದ್ದೆ. ಹಾಗಾಗಿ ಅವರಿಗೆ ನನ್ನಲ್ಲಿ ನಂಬಿಕೆಯಿತ್ತು.  ನಾನು ಏಳನೇ ಕ್ರಮಾಂಕದಲ್ಲಿ ಆಡಲು ಸಮರ್ಥ ಎಂದು ಅವರು ಹೇಳಿದರು. ಅವರ ನಂಬಿಕೆಯೇ ನನಗೆ ಸ್ಪೂರ್ತಿಯಾಯಿತು’ ಎಂದು ಚಹರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಲಂಕಾ ವಿರುದ್ಧ ರೋಚಕ ಸರಣಿ ಗೆಲುವು