ಪರ್ವಾಗಿಲ್ಲ ಬಿಡು ಎಂದು ಸನ್ನೆ ಮಾಡಿ ಸಿಕ್ಸರ್ ಸಿಡಿಸಿದ ಹಾರ್ದಿಕ್: ದಿನೇಶ್ ಕಾರ್ತಿಕ್ ಮಾಡಿದ್ದೇನು ಗೊತ್ತಾ?

Webdunia
ಸೋಮವಾರ, 29 ಆಗಸ್ಟ್ 2022 (08:50 IST)
ದುಬೈ: ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಕೊನೆಯ 6 ಎಸೆತಗಳಲ್ಲಿ 7 ರನ್ ಬೇಕಾಗಿದ್ದಾಗ ಹಾರ್ದಿಕ್ ಪಾಂಡ್ಯ ತೋರಿದ್ದ ಆತ್ಮವಿಶ್ವಾಸವೇ ಟೀಂ ಇಂಡಿಯಾವನ್ನು ಗೆಲ್ಲಿಸಿತು.

ಕೊನೆಯ ಓವರ್ ನ ಮೊದಲ ಎಸೆತದಲ್ಲಿ ರವೀಂದ್ರ ಜಡೇಜಾ ಔಟಾದಾಗ ಪಂದ್ಯಕ್ಕೆ ಟ್ವಿಸ್ಟ್ ಸಿಗಬಹುದೇನೋ ಎಂಬ ಆತಂಕವಿತ್ತು. ಎರಡನೇ ಬಾಲ್ ನಲ್ಲಿ ದಿನೇಶ್ ಕಾರ್ತಿಕ್ ಸಿಂಗಲ್ ತೆಗೆದು ಹಾರ್ದಿಕ್ ಗೆ ಸ್ಟ್ರೈಕ್ ನೀಡಿದರು.

ಆದರೆ ಮೂರನೇ ಎಸೆತದಲ್ಲಿ ರನ್ ಬರಲಿಲ್ಲ. ಆಗ ಎಲ್ಲರ ಆತಂಕ ಮತ್ತಷ್ಟು ಹೆಚ್ಚಾಯ್ತು. ಆದರೆ ಹಾರ್ದಿಕ್ ಮಾತ್ರ ಕೂಲ್ ಆಗಿದ್ದರು. ಇನ್ನೊಂದೆಡೆ ಟೆನ್ ಷನ್ ಮಾಡಿಕೊಂಡು ನಿಂತಿದ್ದ ದಿನೇಶ್ ಕಾರ್ತಿಕ್ ರತ್ತ ಪರ್ವಾಗಿಲ್ಲ ಬಿಡು ಎಂದು ಸನ್ನೆ ಮಾಡಿದರು. ನಾಲ್ಕನೇ ಎಸೆತದಲ್ಲಿ ಯಾವುದಕ್ಕೂ ಅವಕಾಶವೇ ಕೊಡದೇ ಸಿಕ್ಸರ್ ಸಿಡಿಸಿದರು. ಪಂದ್ಯ ಟೀಂ ಇಂಡಿಯಾ ಪಾಲಾಯಿತು. ಹಾರ್ದಿಕ್ ರ ಸಿಕ್ಸರ್ ನಿಂದ ಸಂತೋಷದಿಂದ ದಿನೇಶ್ ಕಾರ್ತಿಕ್ ಓಡಿ ಬಂದು ಬ್ರಾವೋ ಎಂದು ನಡು ಬಾಗಿಸಿ ನಮಸ್ಕರಿಸಿ ತಮ್ಮ ಗೌರವ ಸಲ್ಲಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ಮುಂದಿನ ಸುದ್ದಿ
Show comments