Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾವನ್ನು ಕಾಪಾಡಿದ ‘ಹನುಮ’

ಟೀಂ ಇಂಡಿಯಾವನ್ನು ಕಾಪಾಡಿದ ‘ಹನುಮ’
ದಿ ಓವಲ್ , ಭಾನುವಾರ, 9 ಸೆಪ್ಟಂಬರ್ 2018 (17:34 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿದೆ.

ನಿನ್ನೆ 6 ವಿಕೆಟ್ ಕಳೆದುಕೊಂಡು 174 ಕ್ಕೆ ದಿನದಾಟ ಮುಗಿಸಿದ್ದ ಭಾರತಕ್ಕೆ ಇಂದು ಕೆಲ ಹೊತ್ತು ಹನುಮ ವಿಹಾರಿ ಮತ್ತು ರವೀಂದ್ರ ಜಡೇಜಾ ಉತ್ತಮ ಜತೆಯಾಟವಾಡಿ ಚೇತರಿಕೆ ನೀಡಿದರು. ಚೊಚ್ಚಲ ಪಂದ್ಯದಲ್ಲಿ (56) ಅರ್ಧಶತಕ ಗಳಿಸಿದ ಹನುಮ ವಿಹಾರಿ ನಂತರ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು.

ಇದಾದ ಬಳಿಕ ಇಶಾಂತ್ ಶರ್ಮಾ ಜತೆಗೂಡಿದ ರವೀಂದ್ರ ಜಡೇಜಾ ಇದೀಗ 41 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾಗಿದ್ದರೂ ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಮೊತ್ತ ದಾಟಲು ಟೀಂ ಇಂಡಿಯಾಗೆ ಇನ್ನೂ92 ರನ್ ಗಳ ಅವಶ್ಯಕತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗಿರುವ ಈ ಒಳ್ಳೆ ಗುಣ ರವಿಶಾಸ್ತ್ರಿಯಲ್ಲಿಲ್ಲವಂತೆ!