ಮೊಹಮ್ಮದ್ ಶಮಿ ಏನು ತಪ್ಪು ಮಾಡಿದ್ದಾರೆ.. ಅಜಿತ್ ಅಗರ್ಕರ್ ವಿರುದ್ಧ ಫ್ಯಾನ್ಸ್ ಗರಂ

Krishnaveni K
ಗುರುವಾರ, 6 ನವೆಂಬರ್ 2025 (10:38 IST)
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು ಮತ್ತೆ ಹಿರಿಯ ವೇಗಿ ಮೊಹಮ್ಮದ್ ಶಮಿಯನ್ನು ಕಡೆಗಣಿಸಲಾಗಿದೆ. ಇದಕ್ಕೆ ಫ್ಯಾನ್ಸ್ ಗರಂ ಆಗಿದ್ದಾರೆ.

2023 ರ ಏಕದಿನ ವಿಶ್ವಕಪ್ ಹೀರೋ ಆಗಿದ್ದ ಮೊಹಮ್ಮದ್ ಶಮಿಯನ್ನು ಇತ್ತೀಚೆಗೆ ಎರಡು ವರ್ಷಗಳಿಂದ ಫಿಟ್ನೆಸ್ ನೆಪವೊಡ್ಡಿ ನಿರಂತರವಾಗಿ ತಂಡದಿಂದ ಹೊರಗಿಡಲಾಗುತ್ತಿದೆ. ಈ ವಿಚಾರವಾಗಿ ಸ್ವತಃ ಶಮಿಯೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ನಾನು ಫಿಟ್ ಇದ್ದರೂ ಆಯ್ಕೆ ಸಮಿತಿ ನನ್ನನ್ನು ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಅಜಿತ್ ಅಗರ್ಕರ್ ಫಿಟ್ ಆಗಿದ್ದರೆ ನಮ್ಮ ಬಳಿ ಹೇಳಬೇಕು. ಅವರು ಫಿಟ್ ಆಗಿದ್ದರೆ ಮುಂದಿನ ದಿನಗಳಲ್ಲಿ ಪರಿಶೀಲಿಸುತ್ತೇವೆ ಎಂದಿದ್ದರು.

ಆದರೆ ಈಗ ದೇಶೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದರೂ ಶಮಿಯನ್ನು ಟೀಂ ಇಂಡಿಯಾಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಕಳೆದ ಆಸ್ಟ್ರೇಲಿಯಾ ಸರಣಿಗೆ ಅವರನ್ನು ಪರಿಗಣಿಸಲಿಲ್ಲ. ಏತನ್ಮಧ್ಯೆ ಅವರು ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಆಡಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹಾಗಿದ್ದರೂ ಈಗ ದಕ್ಷಿಣ ಆಫ್ರಿಕಾ ಸರಣಿಯಿಂದ ಅವರನ್ನು ಕೈ ಬಿಡಲಾಗಿದೆ. ಇದು ಅಭಿಮಾನಿಗಳನ್ನು ಕೆರಳಿಸಿದೆ. ಮೊಹಮ್ಮದ್ ಶಮಿ ಏನು ತಪ್ಪು ಮಾಡಿದ್ದಾರೆ ಎಂದು ಅವರನ್ನು ಕಡೆಗಣಿಸಲಾಗುತ್ತಿದೆ? ಒಂದು ವೇಳೆ ಅವರು ದೇಶೀಯ ಕ್ರಿಕೆಟ್ ಆಡಲು ಫಿಟ್ ಆಗಿದ್ದರೆ ರಾಷ್ಟ್ರೀಯ ತಂಡದಲ್ಲೂ ಆಡಬಹುದಲ್ವೇ? ಹಾಗಿದ್ದರೂ ಈ ರಾಜಕೀಯ ಯಾಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ENG VS IND T20: ಈ ಬಾರಿಯಾದರೂ ವೈಭವ್ ಸೂರ್ಯವಂಶಿ ಆಟ ನೋಡಬೇಕೆಂದು ಕಾದಿದ್ದವರಿಗೆ ಇಂದು ನಿರಾಸೆ

ಜಗನ್ನಾಥನ ಮೂರ್ತಿ ಗಿಫ್ಟ್ ಪಡೆಯುವಾಗ ಹಾರ್ದಿಕ್ ಪಾಂಡ್ಯ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್ Video

ಹೆಂಡ್ತಿ ಇದ್ದಾಳೆ ಬಿಡ್ರೋ... ಅಭಿಮಾನಿಗಳ ಕಾಟಕ್ಕೆ ಬೇಸತ್ತ ಕೆಎಲ್ ರಾಹುಲ್ ಮಾಡಿದ್ದೇನು Video

ಇಷ್ಟೊಂದು ಹೊಟ್ಟೆ ಕಿಚ್ಚಾ... ವೈಭವ್ ಸೂರ್ಯವಂಶಿ ಬಗ್ಗೆ ಶ್ರೇಯಸ್ ಅಯ್ಯರ್ ಕಾಮೆಂಟ್ ನೋಡಿ Video

ಭಾರತ, ಇಂಗ್ಲೆಂಡ್ ಟಿ20 ಸರಣಿ ಇಂದಿನಿಂದ: ಕೆಟ್ಟ ಮೇಲೆ ಬುದ್ಧಿ ಕಲಿತಾರಾ ಗೌತಮ್ ಗಂಭೀರ್ ಆಂಡ್ ಟೀಂ

ಮುಂದಿನ ಸುದ್ದಿ
Show comments