Select Your Language

Notifications

webdunia
webdunia
webdunia
webdunia

ಮಾರ್ಕೆಟಿಂಗ್ ಗಿಮಿಕ್‌ಗಾಗಿ ನಕಲಿ ಕಣ್ಣೀರು: RCB ಪ್ರಾಂಚೈಸಿಯನ್ನು ತರಾಟೆಗೆ ತೆಗೆದುಕೊಂಡ ಮೋಹನ್‌ದಾಸ್ ಪೈ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ

Sampriya

ಬೆಂಗಳೂರು , ಶುಕ್ರವಾರ, 29 ಆಗಸ್ಟ್ 2025 (10:52 IST)
Photo Credit X
ಬೆಂಗಳೂರು: ಜೂನ್ 4 ರಂದು ಸಂಭವಿಸಿದ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ ಕಾಲ್ತುಳಿತದ ಸುಮಾರು ಮೂರು ತಿಂಗಳ ನಂತರ ಆರ್‌ಸಿಬಿ ಹಂಚಿಕೊಂಡ ಮೊದಲ ಪೋಸ್ಟ್‌ಗೆ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಕೌಂಟರ್ ನೀಡಿದ್ದಾರೆ. ‌‌

ಫ್ರಾಂಚೈಸ್ ತನ್ನ ಮೊದಲ IPL ಪ್ರಶಸ್ತಿಯನ್ನು ಗೆದ್ದ ಒಂದು ದಿನದ ನಂತರ ನಡೆದ ಕಾಲ್ತುಳಿತದಿಂದ ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ RCB ಕೇರ್ಸ್ ಅನ್ನು ಪ್ರಾರಂಭಿಸಿದೆ ಎಂದು ಫ್ರಾಂಚೈಸ್ ಘೋಷಿಸಿತು.

ಈ ಸಂಬಂಧ ಪ್ರತಿಕ್ರಿಯಿಸಿದ  ಮೋಹನ್‌ದಾಸ್ ಪೈ ಅವರು ಇದು ನಕಲಿ ಕಣ್ಣೀರು ಮತ್ತು "ಮಾರ್ಕೆಟಿಂಗ್ ಗಿಮಿಕ್" ಎಂದು ಕರೆದರು.

ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗಿದೆ.  ‘ಇವು ನಕಲಿ ಕಣ್ಣೀರು ಮತ್ತು @RCBTweets ಮೂಲಕ ಮಾರ್ಕೆಟಿಂಗ್ ಗಿಮಿಕ್, ಈ ರೀತಿಯ ಸಾಮಾನ್ಯ ಮಾರ್ಕೆಟಿಂಗ್ ಕಸದ ಹೊರೆಯಾಗಿದೆ. ಅವರು ತಮ್ಮ ಅಭಿಮಾನಿಗಳಿಗೆ ಹೇಳಬೇಕು ಅವರು ಕೊಲ್ಲಲ್ಪಟ್ಟವರ ಕುಟುಂಬಗಳಿಗೆ ಏನು ಪರಿಹಾರ ನೀಡಿದರೆಂದು ಎಂದು ಪ್ರಶ್ನೆ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಚಾರಕ್ಕೆ ಯಾವತ್ತೂ ಹಿಂದೆ ಸರಿಯುವುದಿಲ್ಲ: ಚೇತೇಶ್ವರ ರಿಯ್ಯಾಕ್ಷನ್