ಕ್ಷಮಿಸಿ ಇನ್ಯಾವತ್ತೂ ದೇಶದ ಪರ ಆಡಲ್ಲ ಎಂದ ಕಳಂಕಿತ ಡೇವಿಡ್ ವಾರ್ನರ್

Webdunia
ಭಾನುವಾರ, 1 ಏಪ್ರಿಲ್ 2018 (05:55 IST)
ಸಿಡ್ನಿ: ಬಾಲ್ ವಿರೂಪ ಪ್ರಕರಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡು, ಒಂದು ವರ್ಷ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಪತ್ರಿಕಾಗೋಷ್ಟಿಯಲ್ಲಿ ಕಂಬನಿ ಮಿಡಿದು ಕ್ಷಮೆ ಯಾಚಿಸಿದ್ದಾರೆ.

ಕ್ಷಮಿಸಿ ಎಲ್ಲರೂ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದೇವೆ. ಇನ್ಯಾವತ್ತೂ ದೇಶದ ಪರ ಆಡಲ್ಲ ಎಂದು ವಾರ್ನರ್ ಕಣ್ಣೀರು ಸುರಿಸುತ್ತಾ ಕ್ಷಮೆ ಯಾಚಿಸಿದ್ದಾರೆ. ಈ ತಪ್ಪನ್ನು ಜೀವಮಾನ ಪೂರ್ತಿ ಮರೆಯಲ್ಲ ಎಂದು ಅವರು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

‘ಈ ತಪ್ಪಿನ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ. ಆಸ್ಟ್ರೇಲಿಯಾ ತಂಡದ ಉಪನಾಯಕನಾಗಿ ನನ್ನ ಕರ್ತವ್ಯದಲ್ಲಿ ಸಂಪೂರ್ಣ ವಿಫಲನಾಗಿದ್ದೇನೆ’ ಎಂದು ವಾರ್ನರ್ ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಕೂಡಾ ಪತ್ರಿಕಾಗೋಷ್ಠಿಯಲ್ಲಿ ಅಳುತ್ತಾ ತಮ್ಮ ಕ್ಷಮೆ ಯಾಚಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರ್‌ಸಿಬಿಯ ವಿನ್ನಿಂಗ್‌ ಶಾಟ್‌ ಹೊಡೆಯುತ್ತಿದ್ದಂತೆ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟ ಕೊಹ್ಲಿ: ರೋಮ್ಯಾಂಟಿಕ್ Video

ಮಹೇಂದ್ರ ಸಿಂಗ್‌ ಧೋನಿ ಇಂಪ್ಯಾಕ್ಟ್ ಆಟಗಾರನಾಗಿ ಬರುವುದಕ್ಕಿಂತ ನಿವೃತ್ತಿಯೇ ಲೇಸು ಎಂದ ಅಶ್ವಿನ್‌

IPL 2026: ಆಹಾ ಕಿಂಗ್.. ಆರ್ ಸಿಬಿ ರಾಕಿಂಗ್.. ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು

ಎಸ್‌ಆರ್‌ಎಚ್ ವಿರುದ್ಧ ಬ್ಯಾಟ್ ಹಿಡಿಯುವ ಮುನ್ನಾವೇ ಕಿಂಗ್ ಕೊಹ್ಲಿ ಹೊಸ ರೆಕಾರ್ಡ್‌, ಇದು ನಿಯತ್ತು ಎಂದ ಆರ್‌ಸಿಬಿ ಫ್ಯಾನ್ಸ್‌

ಆರ್‌ಸಿಬಿ ತವರು ಅಂಗಳದಲ್ಲಿ ಅಬ್ಬರಿಸಿದ ಈಶಾನ್‌, ಬಿಗ್ ಟಾರ್ಗೆಟ್‌ ಕೊಟ್ಟ ಎಸ್‌ಆರ್‌ಎಚ್‌

ಮುಂದಿನ ಸುದ್ದಿ
Show comments