Webdunia - Bharat's app for daily news and videos

Install App

ಕೊಹ್ಲಿ ಸುಳ್ಳುಗಾರ, ಗಂಗೂಲಿಗೆ ಕೊಹ್ಲಿಯನ್ನು ಕಂಡರೆ ಆಗುತ್ತಿರಲಿಲ್ಲ: ವಿವಾದಕ್ಕೀಡಾದ ಚೇತನ್ ಶರ್ಮಾ

Webdunia
ಬುಧವಾರ, 15 ಫೆಬ್ರವರಿ 2023 (10:14 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ವಿರುದ್ಧ ಕುಟುಕು ಕಾರ್ಯಾಚರಣೆಯೊಂದರಲ್ಲಿ ನೀಡಿದ ಹೇಳಿಕೆ ಈಗ ಸಂಚಲನ ಸೃಷ್ಟಿ ಮಾಡಿದೆ.

ಕುಟುಕು ಕಾರ್ಯಾಚಾರಣೆಯೊಂದರಲ್ಲಿ ಚೇತನ್ ನೀಡಿರುವ ಹೇಳಿಕೆಗಳು ಈಗ ಬಿಸಿಸಿಐ ಕೆಂಗಣ‍್ಣಿಗೆ ಗುರಿಯಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗರು ಶೇ.100 ರಷ್ಟು ಫಿಟ್ ಇಲ್ಲದೇ ಇದ್ದರೂ ಉದ್ದೀಪನಾ ಪರೀಕ್ಷೆಯಲ್ಲಿ ಪತ್ತೆಯಾಗದಂತಹ ಇಂಜೆಕ್ಷನ್ ಬಳಸಿ ಫಿಟ್ ಎಂದು ಘೋಷಿಸಿಕೊಳ್ಳುತ್ತಾರೆ. ಕೊಹ್ಲಿ ಮತ್ತು ಗಂಗೂಲಿ ನಡುವೆ ಸಂಘರ್ಷವಿತ್ತು. ರೋಹಿತ್ ಮತ್ತು ಕೊಹ್ಲಿ ನಡುವೆ ಅಹಂ ಸಂಘರ್ಷವಿತ್ತು ಎಂಬಿತ್ಯಾದಿ ಸ್ಪೋಟಕ ವಿಚಾರಗಳನ್ನು ಚೇತನ್ ಶರ್ಮಾ ಬಿಚ್ಚಿಟ್ಟಿದ್ದಾರೆ. ಅವರ ಈ ಹೇಳಿಕೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ.

ಚೇತನ್ ಹೇಳಿರುವಂತೆ, ಜಸ್ಪ್ರೀತ್ ಬುಮ್ರಾ ಈ ಮೊದಲು 100% ಫಿಟ್ ಇಲ್ಲದೇ ಇದ್ದರೂ ಇಂಜೆಕ್ಷನ್ ನೀಡಿ ಬಲವಂತವಾಗಿ ಅವರನ್ನು ಆಡಿಸಲಾಯಿತು. ಇದೇ ರೀತಿ ಇತರ ಕ್ರಿಕೆಟಿಗರೂ ಮಾಡುತ್ತಾರೆ. ಇಶಾನ್ ಕಿಶನ್, ಶುಬ್ಮನ್ ಗಿಲ್ ಮುಂತಾದವರ ಫಾರ್ಮ್ ನಿಂದಾಗಿ ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್, ಶಿಖರ್ ಧವನ್ ವೃತ್ತಿ ಜೀವನ ಸಂಕಷ್ಟಕ್ಕೆ ಸಿಲುಕಿದೆ.

ವಿರಾಟ್ ಕೊಹ್ಲಿ ಮತ್ತು ಗಂಗೂಲಿ ನಡುವೆ ಸಂಘರ್ಷವಿತ್ತು. ಕೊಹ್ಲಿ ತಾವು ಮಂಡಳಿಗಿಂಲೂ ದೊಡ್ಡವರು ಎಂದುಕೊಂಡಿದ್ದರು. ರವಿಶಾಸ್ತ್ರಿಯನ್ನು ಕೋಚ್ ಮಾಡುವುದರಲ್ಲಿ ಕೊಹ್ಲಿ ಪಾತ್ರ ದೊಡ್ಡದಿತ್ತು. ನಾಯಕತ್ವ ಬಿಡಬೇಡಿ ಎಂದು ಗಂಗೂಲಿ ಹೇಳಿದ್ದರು. ಆದರೂ ಗಂಗೂಲಿ ತಮ್ಮ ನಾಯಕತ್ವ ಕೈಬಿಡಲು ಕಾರಣ ಎಂದು ತಿಳಿದ ಕೊಹ್ಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೊಹ್ಲಿಯನ್ನು ನಾಯಕತ್ವದಿಂದ ಕೈ ಬಿಡುವುದು ಕೇವಲ ಗಂಗೂಲಿ ನಿರ್ಧಾರವಾಗಿರಲಿಲ್ಲ.

ರೋಹಿತ್ ಶರ್ಮಾ ಮುಂದಿನ ದಿನಗಳಲ್ಲಿ ಟಿ20 ತಂಡದ ನಾಯಕರಾಗಿರುವುದಿಲ್ಲ. ಹಾರ್ದಿಕ್ ಪಾಂಡ್ಯ ದೀರ್ಘಾವಾಧಿಯ ನಾಯಕರಾಗುತ್ತಾರೆ. ತಂಡದಲ್ಲಿ ಎರಡು ಗ್ರೂಪ್ ಇದೆ. ಒಂದನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಾರೆ, ಇನ್ನೊಂದನ್ನು ಕೊಹ್ಲಿ ಮುನ್ನಡೆಸುತ್ತಾರೆ ಎಂಬಿತ್ಯಾದಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ಮುಂದಿನ ಸುದ್ದಿ
Show comments