Webdunia - Bharat's app for daily news and videos

Install App

ರೋಚಕ ಪಂದ್ಯದಲ್ಲಿ ಅಂಪಾಯರ್, ಲಂಕಾ ಆಟಗಾರರ ಜತೆ ಬಾಂಗ್ಲಾ ಆಟಗಾರರ ಜಗಳ!

Webdunia
ಶನಿವಾರ, 17 ಮಾರ್ಚ್ 2018 (09:28 IST)
ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಬಾಂಗ್ಲಾದೇಶ-ಶ್ರೀಲಂಕಾ ಪಂದ್ಯದಲ್ಲಿ ಗೆದ್ದ ಬಾಂಗ್ಲಾ ಟೀಂ ಇಂಡಿಯಾ ಜತೆ ಫೈನಲ್ಸ್ ನಲ್ಲಿ ಸೆಣಸಲಿದೆ. ಆದರೆ ರೋಚಕ ಘಟ್ಟದಲ್ಲಿ ಬಾಂಗ್ಲಾ ಆಟಗಾರರು ತಗಾದೆ ತೆಗೆದು ಸುದ್ದಿಯಾದರು.

ಆಗ ಲಂಕಾ ಗೆಲುವಿಗೆ 3 ಬಾಲ್ ಗಳಲ್ಲಿ 8 ರನ್ ಬೇಕಾಗಿತ್ತು. ಮೊಹಮ್ಮದುಲ್ಲಾ ಮತ್ತು ಮುಸ್ತಾಫಿಜ್ ಬ್ಯಾಟಿಂಗ್ ಮಾಡುತ್ತಿದ್ದರು. ಓವರ್  ಮೊದಲ ಎಸೆತದಲ್ಲಿ ಔಟ್ ಎಂದು ತೀರ್ಪು ನೀಡಿದ್ದ ಅಂಪಾಯರ್, ನಂತರ ರಿವ್ಯೂ ಬಳಸಿದ್ದರಿಂದ ನಾಟೌಟ್ ಎಂದರು. ಆದರೆ ಮರು ಎಸೆತಕ್ಕೇ ಮತ್ತೆ ಮುಸ್ತಾಫಿಜ್ ರನೌಟಾದರು.

ಈ ಎಸೆತ ಮುಸ್ತಾಫಿರ್ ಬ್ಯಾಟ್ ಗೆ ತಾಕದೇ ವಿಕೆಟ್ ಕೀಪರ್ ಕೈ ಸೇರಿತು. ಆದರೆ ರನ್ ಗಳಿಸಲು ಮುಸ್ತಾಫಿಜ್ ಓಡಿದರು. ಆದರೆ ಈ ಸಂದರ್ಭದಲ್ಲಿ ಅಂಪಾಯರ್ ನೋ ಬಾಲ್ ಎಂದು ಸಿಗ್ನಲ್ ಮಾಡಲು ಹೊರಟ ಅಂಪಾಯರ್ ಮುಸ್ತಾಫಜ್ ರನೌಟ್ ಆಗುತ್ತಿದ್ದಂತೆ ಕೈ ಹಿಂಪಡೆದರು.

ಇದು ಬಾಂಗ್ಲಾ ಆಟಗಾರರನ್ನು ಕೆರಳಿಸಿತು. ತಕ್ಷಣ ಮೈದಾನಕ್ಕಿಳಿದ ಆಟಗಾರರು ಅಂಪಾಯರ್, ಲಂಕಾ ನಾಯಕನ ಜತೆ ವಾಗ್ವಾದಕ್ಕಿಳಿದರು. ಇದರಿಂದ ಕೆಲ ಕಾಲ ಪಂದ್ಯ ನಿಂತಿತು. ನಂತರ ಬಾಂಗ್ಲಾ ಆಟಗಾರರನ್ನು ಮನ ಒಲಿಸಿ ಆಟ ಮುಂದುವರಿಸಲಾಯಿತು. ಅಂತಿಮ ಬಾಲ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಬಾಂಗ್ಲಾ ಲಂಕಾ ನೀಡಿದ 160 ರನ್ ಗಳ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ಕಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SL:ಥ್ಯಾಂಕ್ಸ್ ಮಗಾ… ಬಚಾವ್ ಮಾಡಿದ ಗೆಳೆಯ ದೇವದತ್ ಪಡಿಕ್ಕಲ್ ಗೆ ಮೈದಾನದಲ್ಲೇ ತಬ್ಬಿ ಕಿಸ್ ಕೊಟ್ಟ ಕೆಎಲ್ ರಾಹುಲ್ Video

IND vs SL: ಕ್ಯಾಪ್ಟನ್ ಅಂದ್ರೆ ಹೀಗಿರಬೇಕು… ಶುಭಮನ್ ಗಿಲ್ ಪಡೆದ ಈ ಅದ್ಭುತ ಕ್ಯಾಚ್ ನೋಡಿ ಕಣ್ತುಂಬಿಕೊಳ್ಳಬೇಕು

ಭಾರತ ತಂಡದ 600ನೇ ಚಾರಿತ್ರಿಕ ಪಂದ್ಯಕ್ಕೆ ವರುಣನ ಅವಕೃಪೆ: ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ

ಲಂಕಾ ವಿರುದ್ಧದ ಟೆಸ್ಟ್‌ಗೂ ಮುನ್ನಾ ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ, Video

ಹಾಕಿ ವಿಶ್ವಕಪ್‌ ಮಹಾಸಮರ ನಾಳೆ ಶುರು: ಚಿನ್ನದ ಪದಕದ ಕನವರಿಕೆಯಲ್ಲಿ ಟೀಂ ಇಂಡಿಯಾ

ಮುಂದಿನ ಸುದ್ದಿ
Show comments