Select Your Language

Notifications

webdunia
webdunia
webdunia
webdunia

ದ್ರಾವಿಡ್ ಹುಡುಗರನ್ನು ಎರಡನೇ ದರ್ಜೆ ತಂಡ ಎಂದು ಲೇವಡಿ ಮಾಡಿದ ಅರ್ಜುನ ರಣತುಂಗ

ದ್ರಾವಿಡ್ ಹುಡುಗರನ್ನು ಎರಡನೇ ದರ್ಜೆ ತಂಡ ಎಂದು ಲೇವಡಿ ಮಾಡಿದ ಅರ್ಜುನ ರಣತುಂಗ
ಕೊಲೊಂಬೋ , ಭಾನುವಾರ, 4 ಜುಲೈ 2021 (09:32 IST)
ಕೊಲೊಂಬೋ: ಸೀಮಿತ ಓವರ್ ಗಳ ಸರಣಿಗೆ ಪ್ರಮುಖರಿಲ್ಲದೇ ಶಿಖರ್ ಧವನ್ ನೇತೃತ್ವದಲ್ಲಿ ಲಂಕಾಗೆ ಪ್ರಯಾಣ ಬೆಳೆಸಿರುವ ಟೀಂ ಇಂಡಿಯಾವನ್ನು ಎರಡನೇ ದರ್ಜೆ ತಂಡ ಎಂದು ಲಂಕಾ ಮಾಜಿ ನಾಯಕ ಅರ್ಜುನ ರಣತುಂಗ ಲೇವಡಿ ಮಾಡಿದ್ದಾರೆ.


ಕೋಚ್ ದ್ರಾವಿಡ್-ನಾಯಕ ಶಿಖರ್ ಧವನ್ ನೇತೃತ್ವದಲ್ಲಿ ಟೀಂ ಇಂಡಿಯಾ ಎರಡನೇ ತಂಡ ಲಂಕಾದಲ್ಲಿ ಏಕದಿನ ಮತ್ತು ಟಿ20 ಸರಣಿ ಆಡಲು ತೆರಳಿದೆ. ಜುಲೈ 13 ರಿಂದ ಸರಣಿ ಆರಂಭವಾಗಲಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಣತುಂಗ ‘ಟೀಂ ಇಂಡಿಯಾ ಎರಡನೇ ದರ್ಜೆ ತಂಡ ಇಲ್ಲಿಗೆ ಆಗಮಿಸಿರುವುದು ನಮಗೆ ಮಾಡಿದ ಅವಮಾನ. ಟಿವಿ ಜಾಹೀರಾತು ಆದಾಯಕ್ಕಾಗಿ ಇಂತಹ ತಂಡದೊಂದಿಗೆ ಆಡಲು ಒಪ್ಪಿಗೆ ನೀಡಿರುವುದಕ್ಕೆ ನಮ್ಮ ಕ್ರಿಕೆಟ್ ಆಡಳಿತ ಮಂಡಳಿಯನ್ನು ದೂರಬೇಕು’ ಎಂದು ಅರ್ಜುನ ರಣತುಂಗ ಲೇವಡಿ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಲಂಕಾ ಮಂಡಳಿ ಭಾರತ ಪ್ರಬಲ ತಂಡವನ್ನೇ ಕಳುಹಿಸಿದೆ ಎಂದು ಸಮರ್ಥಿಸಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೇಟ್ ಅಭಿಮಾನಿಗಳು ತಪ್ಪದೇ ಓದಿ