Webdunia - Bharat's app for daily news and videos

Install App

ಧೋನಿ ಮತ್ತೊಬ್ಬ ದೇವರಾಗಿ ಬಿಟ್ಟರು!

Webdunia
ಭಾನುವಾರ, 6 ಮೇ 2018 (07:29 IST)
ಪುಣೆ: ಈ ಐಪಿಎಲ್ ಕೂಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಗೆ ಕಾಲಿಗೆ ಬೀಳುವ ಅಭಿಮಾನಿಗಳ ಕಾಟ ಅತಿಯಾಗಿದೆ.

ಕಳೆದ ಎರಡು ಮೂರು ಪಂದ್ಯಗಳಿಂದ ಧೋನಿಗೆ ಮೈದಾನದಲ್ಲೇ ಬಂದು ಕಾಲಿಗೆ ನಮಸ್ಕರಿಸುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂತೂ ಅಭಿಮಾನಿಗಳ ಪಾಲಿಗೆ ಧೋನಿ ದೇವರಾಗಿ ಬಿಟ್ಟಿದ್ದಾರೆ!

ಅಭಿಮಾನದ ಪರಾಕಾಷ್ಠೆ ಎಂದೇ ಇದನ್ನು ಹೇಳಬಹುದು. ಕಳೆದ ಪಂದ್ಯ ಮುಗಿದ ಬಳಿಕವೂ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ನೀವೇ ನಮ್ಮ ದೇವರು ಎಂದು ಧೋನಿ ಕಾಲಿಗೆರಗಿದ್ದರು. ಇದೀಗ ನಿನ್ನೆ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ಗೆಲುವಿನ ರನ್ ಗಳಿಸಿದ ಬಳಿಕ ಗ್ಲೌಸ್ ಬಿಚ್ಚಿ ಪೆವಿಲಿಯನ್ ಕಡೆಗೆ ಸಾಗಬೇಕೆಂದು ಹೊರಡುವಷ್ಟರಲ್ಲಿ ಅದೆಲ್ಲಿಂದಲೋ ಬಂದ ಅಭಿಮಾನಿ ಗಟ್ಟಿಯಾಗಿ ಕಾಲು ಹಿಡಿದುಕೊಂಡು ಬಿಟ್ಟ! ಧೋನಿಗಂತೂ ಈಗೀಗ ಇದೆಲ್ಲಾ ಅಭ್ಯಾಸವಾಗಿರಬೇಕು. ಹಾಗಾಗಿ ಹೆಚ್ಚು ಗೊಂದಲಕ್ಕೊಳಗಾಗದೇ ಆತನನ್ನು ಹಿಡಿದೆತ್ತಿ ಬೆನ್ನು ತಟ್ಟಿದರು. ಅಂತೂ ಅಭಿಮಾನಿಗಳ ಪಾಲಿಗೆ ಸಚಿನ್ ನಂತರ ಕ್ರಿಕೆಟ್ ನಲ್ಲಿ ಮತ್ತೊಬ್ಬ ದೇವರ ಸೃಷ್ಟಿಯಾಗಿದೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ENG vs IND: ಟೆಸ್ಟ್‌ ಆರಂಭಕ್ಕೂ ಮುನ್ನಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ

ದಯವಿಟ್ಟು ಎಲ್ಲ ಟೆಸ್ಟ್‌ಗಳನ್ನು ಆಡಿ: ಬೂಮ್ರಾಗೆ ಪತ್ನಿಯಲ್ಲೇ ಸಂದೇಶ ಕಳುಹಿಸಿದ ಗವಾಸ್ಕಾರ್‌, ಪೂಜಾರ

ಅದ್ಭುತ ಪ್ರದರ್ಶನ ನೀಡಿಯೂ ಕೆಎಲ್ ರಾಹುಲ್ ಗೆ ತಂಡದಲ್ಲಿ ಇಂಥಾ ಸ್ಥಾನವೇ

ಪೆವಿಲಿಯನ್ ನಲ್ಲಿ ಕೂತು ಯಾರೂ ಮಾಡದ ಕೆಲಸವೊಂದನ್ನು ಮಾಡ್ತಾರೆ ಸಾಯಿ ಸುದರ್ಶನ್

ಫ್ಲಿಪ್ ಮಾಡೋ ಎಂದ ಸುನಿಲ್ ಗವಾಸ್ಕರ್: ರಿಷಭ್ ಪಂತ್ ಉತ್ತರ ಏನಿತ್ತು ವಿಡಿಯೋ ನೋಡಿ

ಮುಂದಿನ ಸುದ್ದಿ
Show comments