Webdunia - Bharat's app for daily news and videos

Install App

ಎದುರಾಳಿ ತಂಡದಲ್ಲಿದ್ದರೂ ವಿರಾಟ್ ಕೊಹ್ಲಿಗೆ ಧೋನಿಯೇ ಸಲಹೆ ಕೊಟ್ಟರು!

Webdunia
ಭಾನುವಾರ, 6 ಮೇ 2018 (07:23 IST)
ಪುಣೆ: ಟೀಂ ಇಂಡಿಯಾ ಪರ ಆಡುವಾಗ ನಾಯಕ ವಿರಾಟ್ ಕೊಹ್ಲಿಗೆ ಧೋನಿಯೇ ಮಾರ್ಗದರ್ಶಕ. ಅದು ಐಪಿಎಲ್ ನಲ್ಲಿ ವಿರೋಧಿ ಟೀಂನಲ್ಲಿದ್ದರೂ ಮುಂದುವರಿದಿದೆ. 

ಧೋನಿ ಚೆನ್ನೈ ತಂಡದ ನಾಯಕರಾದರೆ, ಕೊಹ್ಲಿ ಆರ್ ಸಿಬಿ ನಾಯಕ. ನಿನ್ನೆ ಇವರಿಬ್ಬರೂ ಮುಖಾಮುಖಿಯಾಗಿದ್ದರು. ಆದರೂ ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ಕೊಹ್ಲಿ, ಧೋನಿ ನೀಡಿದ ಸಂಜ್ಞೆಯನ್ನೇ ಪಾಲಿಸಿದರು!

ಆಗಿದ್ದಿಷ್ಟೇ. ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ ಬೌಲರ್ ಔಟ್ ನೀಡುವಂತೆ ಬಲವಾಗಿ ಅಪೀಲ್ ಮಾಡಿದರು. ಆದರೆ ಧೋನಿ ಕ್ರೀಸ್ ನಿಂದ ಅಲುಗಾಡಲಿಲ್ಲ. ಸಾಮಾನ್ಯವಾಗಿ ತಾವು ಔಟೆಂದು ಗೊತ್ತಾದರೆ ಅಂಪಾಯರ್ ತೀರ್ಪಿಗೂ ಕಾಯದೇ ಧೋನಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಾರೆ. ಅದರಲ್ಲೂ ವಿಶೇಷವಾಗಿ ಡಿಆರ್ ಎಸ್ ತೆಗೆದುಕೊಳ್ಳಬೇಕಾದರೆ, ಅಂಪಾಯರ್ ಗಿಂತಲೂ ಚುರುಕಾಗಿ ಬ್ಯಾಟ್ಸ್ ಮನ್ ಔಟ್ ಹೌದೋ ಅಲ್ಲವೋ ಎಂದು ಕರಾರುವಕ್ಕಾಗಿ ನಿರ್ಧರಿಸುತ್ತಾರೆ.

ಹಾಗಾಗಿ ಬೌಲರ್ ಅಪೀಲ್ ಮಾಡಿದರೂ ಧೋನಿ ಕ್ರೀಸ್ ನಲ್ಲೇ ನಿಂತಿರುವುದು ನೋಡಿ ವಿರಾಟ್ ಕೊಹ್ಲಿ ಅದನ್ನೇ ಸೂಚನೆಯೆಂದು ಪರಿಗಣಿಸಿ ಡಿಆರ್ ಎಸ್ ಗೆ ಮನವಿ ಸಲ್ಲಿಸುವ ಗೋಜಿಗೇ ಹೋಗಲಿಲ್ಲ! ಅಷ್ಟು ನಂಬಿಕೆ ತನ್ನ ಮೆಚ್ಚಿನ ಕ್ಯಾಪ್ಟನ್ ಮೇಲೆ ಕೊಹ್ಲಿಗೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
 
.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಅಂದ್ರೆ ಸುಮ್ನೇನಾ, ಯೋ ಯೋ ಟೆಸ್ಟ್ ನಲ್ಲಿ ಎಷ್ಟು ಅಂಕ ನೋಡಿ

World Badminton: ಮೋಡಿ ಮಾಡಿದ ಸಾತ್ವಿಕ್‌–ಚಿರಾಗ್‌ ಜೋಡಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾರಿತ್ರಿಕ ಸಾಧನೆ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ತಡವಾಗಿ ಆರಂಭವಾಗಲಿದೆ, ಕಾರಣ ಇಲ್ಲಿದೆ

ರಾಜಸ್ಥಾನ್ ರಾಯಲ್ಸ್ ತೊರೆದ ರಾಹುಲ್ ದ್ರಾವಿಡ್: ಈ ತಂಡಕ್ಕೆ ಕೋಚ್ ಆಗಲಿ ಅಂತಿದ್ದಾರೆ ಫ್ಯಾನ್ಸ್

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಕ್ಕೆ 25 ಲಕ್ಷ ರೂ ನೀಡಿದ ಆರ್ ಸಿಬಿ

ಮುಂದಿನ ಸುದ್ದಿ
Show comments