Publish Date: Fri, 09 Jun 2023 (10:29 IST)
Updated Date: Fri, 09 Jun 2023 (10:32 IST)
ಹೈದರಾಬಾದ್: ಇತ್ತೀಚೆಗಷ್ಟೇ ಐಪಿಎಲ್ ನಿಂದ ನಿವೃತ್ತರಾದ ಕ್ರಿಕೆಟಿಗ ಅಂಬಟಿ ರಾಯುಡು ಈಗ ರಾಜಕೀಯದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಲು ತಯಾರಿ ನಡೆಸಿದ್ದಾರೆಯೇ? ಹೀಗೊಂದು ಅನುಮಾನ ಶುರುವಾಗಿದೆ.
ಅಂಬಟಿ ರಾಯುಡು ಇದು ಎರಡನೇ ಬಾರಿಗೆ ಆಂಧ್ರ ಸಿಎಂ ಜಗನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಅವರ ರಾಜಕೀಯ ಪ್ರವೇಶದ ಸುದ್ದಿಗೆ ಪುಷ್ಠಿ ನೀಡಿದೆ.
ಮುಂದಿನ ಚುನಾವಣೆಯಲ್ಲಿ ಗುಂಟೂರು ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವ ಇಂಗಿತ ಅಂಬಟಿ ರಾಯುಡುಗೆ ಇದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಬಳಿಕ ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಫೈನಲ್ ಆಡಿದ್ದೇ ಅವರ ಕೊನೆಯ ಪಂದ್ಯವಾಗಿತ್ತು.