Select Your Language

Notifications

webdunia
webdunia
webdunia
webdunia

ಅಜಿಂಕ್ಯಾ ರೆಹಾನೆ ಭವಿಷ್ಯ ದ್ರಾವಿಡ್ ಕೈಯಲ್ಲಿ

ಅಜಿಂಕ್ಯಾ ರೆಹಾನೆ ಭವಿಷ್ಯ ದ್ರಾವಿಡ್ ಕೈಯಲ್ಲಿ
ಮುಂಬೈ , ಬುಧವಾರ, 22 ಜೂನ್ 2022 (08:00 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಅಜಿಂಕ್ಯಾ ರೆಹಾನೆಗೆ ಇಷ್ಟು ದಿನ ನಾಯಕರಾಗಿದ್ದ ವಿರಾಟ್ ಕೊಹ್ಲಿ ಕೃಪಾಕಟಾಕ್ಷವಿತ್ತು.

ಆದರೆ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಮೇಲೆ ತಂಡದ ಆಯ್ಕೆ ವಿಚಾರದಲ್ಲಿ ಸಂಪೂರ್ಣವಾಗಿ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಹಿಡಿತ ಹೊಂದಿದ್ದಾರೆ. ರೆಹಾನೆಗೆ ಜೊತೆಗಾರನಾಗಿದ್ದ ಪೂಜಾರ, ದೇಶೀಯ ಕ್ರಿಕೆಟ್ ಮತ್ತು ಕೌಂಟಿ ಕ್ರಿಕೆಟ್ ನಲ್ಲಿ ರನ್ ಗಳಿಸಿ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.

ಆದರೆ ರೆಹಾನೆ ಮಾತ್ರ ಇನ್ನೂ ಪರದಾಡುತ್ತಿದ್ದಾರೆ. ಇತ್ತೀಚೆಗೆ ಶಿಖರ್ ಧವನ್, ವೃದ್ಧಿಮಾನ್ ಸಹಾ ತಂಡದಿಂದ ಸ್ಥಾನ ಕಳೆದುಕೊಂಡ ಸ್ಥಿತಿಯೇ ರೆಹಾನೆಗೂ ಬಂದೊದಗಿದರೂ ಅಚ್ಚರಿಯಿಲ್ಲ. ಈಗ ಕೋಚ್ ‍ದ್ರಾವಿಡ್ ಬೆಂಬಲಿಸಿದರೆ ಮಾತ್ರ ರೆಹಾನೆಗೆ ಮುಂದಿನ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಸಿಗಬಹುದು. ಇಲ್ಲದೇ ಹೋದರೆ ಅವರ ವೃತ್ತಿ ಬದುಕು ಸಂಕಷ್ಟಕ್ಕೀಡಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜರ್ಮನಿಯಲ್ಲಿ ಕೆಎಲ್ ರಾಹುಲ್: ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದ ಕ್ರಿಕೆಟಿಗ