Webdunia - Bharat's app for daily news and videos

Install App

ಲಾಕ್ ಡೌನ್ ನಿಂದಾಗಿ ಹೆಚ್ಚುತ್ತಿದೆ ಮಾನಸಿಕ ಖಿನ್ನತೆ ಪ್ರಕರಣಗಳು

Webdunia
ಭಾನುವಾರ, 3 ಮೇ 2020 (08:44 IST)
ಬೆಂಗಳೂರು: ಲಾಕ್ ಡೌನ್ ಎಂದು ಜನತೆ ಮನೆಯಲ್ಲೇ ಬಂಧಿಯಾಗಿ ಎಷ್ಟೋ ದಿನ ಕಳೆದಿದೆ. ಇನ್ನೂ ಎರಡು ವಾರ ಕಾಲ ಲಾಕ್ ಡೌನ್ ವಿಸ್ತರಣೆಯಾಗಿದೆ. ಹೀಗಿರುವಾಗ ಮನೆಯಲ್ಲೇ ಬಂಧಿಯಾಗಿರುವವರ ಮಾನಸಿಕ ಆರೋಗ್ಯವೂ ಕ್ಷೀಣಿಸುತ್ತಿದೆ.


ಮಹಿಳೆಯರು ವಿನಾಕಾರಣ ಮನೆಯವರ ಮೇಲೆ ಸಿಡುಕುವುದು, ಕೋಪಗೊಳ್ಳುವುದು, ಬೇಗನೇ ಅಳುವುದು ಇತ್ಯಾದಿ ಖಿನ್ನತೆಯ ಲಕ್ಷಣ ತೋರಿದರೆ ಪುರುಷರಿಗೆ ಭವಿಷ್ಯದ ಭಯ ಕಾಡುತ್ತಿದೆ.

ಇದೆಲ್ಲವೂ ಮಾನಸಿಕ ಖಿನ್ನತೆಗೆ ಕಾರಣವಾಗುತ್ತಿದೆ. ಲಾಕ್ ಡೌನ್ ಮುಗಿದ ಮೇಲೂ ಮಾನಸಿಕ ಸ್ವಾಸ್ಥ್ಯ ಕೆಡುವ ಅನೇಕ ಘಟನೆಗಳು ನಡೆಯಲಿವೆ. ಹಲವರು ಉದ್ಯೋಗ ಕಳೆದುಕೊಳ್ಳಲಿದ್ದರೆ, ಇನ್ನು ಹಲವರು ಹಣ ಹೊಂದಿಸಲಾಗದೇ ಮತ್ತಷ್ಟು ನರಕಯಾತನೆ ಅನುಭವಿಸಲಿದ್ದಾರೆ.

ಡಿಪ್ರೆಷನ್ ನಿಂದ ಹೊರಬರಲು ಅನೇಕರು ಡಿಜಿಟಲ್ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಮೊಬೈಲ್ ಅತಿಯಾಗಿ ನೋಡುವುದು, ಟಿವಿ ನೋಡುವುದು, ಇಂಟರ್ನೆಟ್ ಬಳಕೆ ಹೆಚ್ಚುತ್ತಿದೆ. ಅಂತೂ ಕೊರೋನಾ ನಿಯಂತ್ರಿಸಲು ಲಾಕ್ ಡೌನ್ ಸಹಕಾರಿಯಾಗಿದ್ದರೂ ಇದರ ಪರಿಣಾಮ ಇನ್ನೊಂದು ರೀತಿಯಾಗಿ ಜನರ ಮೇಲಾಗುತ್ತಿದೆ ಎನ್ನುವುದನ್ನು ಮರೆಯಬಾರದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮಕ್ಕಳನ್ನು ಓದಿಸಲು ಸರ್ಕಸ್ ಮಾಡುತ್ತಿರುವ ಪೋಷಕರಿಗೆ ಇಲ್ಲಿದೆ ಕೆಲ ಟಿಪ್ಸ್‌

ಇದೀಗ ಸಂಡಿಗೆ ಮಾಡಲು ಒಳ್ಳೆಯ ಸಮಯ, ಸಿಂಪಲ್ ಈರುಳ್ಳಿ ಸಂಡಿಗೆ ವಿಧಾನ ಹೀಗಿದೆ

ಮಕ್ಕಳ ನೆಚ್ಚಿನ ಹೋಳಿ ಹಬ್ಬದಲ್ಲಿ ಆರೋಗ್ಯದ ಮೇಲೂ ಇರಲಿ ಹೆಚ್ಚಿನ ಕಾಳಜಿ

ಮುಂದಿನ ಸುದ್ದಿ
Show comments