Select Your Language

Notifications

webdunia
webdunia
webdunia
webdunia

ನಿರ್ದೇಶಕ ವರಾಹಿ ವಿರುದ್ಧ ಶ್ರೀರೆಡ್ಡಿ ದೂರು ದಾಖಲಿಸಿದ್ದು ಯಾಕೆ?

ನಿರ್ದೇಶಕ ವರಾಹಿ ವಿರುದ್ಧ ಶ್ರೀರೆಡ್ಡಿ ದೂರು ದಾಖಲಿಸಿದ್ದು ಯಾಕೆ?
ಹೈದರಾಬಾದ್ , ಮಂಗಳವಾರ, 31 ಜುಲೈ 2018 (08:01 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಟಾಲಿವುಡ್ ನಲ್ಲಿ ಹೋರಾಟ ನಡೆಸಿದ ನಟಿ ಶ್ರೀರೆಡ್ಡಿ ಅವರು ಇದೀಗ ನಿರ್ದೇಶಕ ವರಾಹಿ ವಿರುದ್ಧ ದೂರು ದಾಖಲಿಸಿದ್ದಾರಂತೆ.


ಹೌದು. ಕಾಸ್ಟಿಂಗ್ ಕೌಚ್ ವಿಚಾರವಾಗಿ ನಟಿ ಶ್ರೀರೆಡ್ಡಿ ಅವರು ಟಾಲಿವುಡ್ ಹಾಗೂ ಕಾಲಿವುಡ್ ನ ಸ್ಟಾರ್ ನಟರು, ನಿರ್ಮಾಪಕರು ಹಾಗೂ ನಿರ್ದೇಶಕರ ಮೇಲೆ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ವರಾಹಿ ಅವರು ,’ಈ ರೀತಿ ಆಕೆ ಮಾಡುತ್ತಿರುವ ಆಧಾರವಿಲ್ಲದ ಆರೋಪಗಳು ನಿಜಕ್ಕೂ ನಾಚಿಕೆಯಾಗುವಂತದ್ದು, ಸಿನಿಮಾ ಅವಕಾಶಗಳಿಗಾಗಿ ತಾನು ನಿರ್ದೆಶಕರು ಹಾಗೂ ನಟರ ಜೊತೆ ಮಂಚಕ್ಕೆ ಏರಿದ್ದೆ ಎಂದು ಆಕೆಯೇ ಹೇಳಿಕೊಳ್ಳುತ್ತಿದ್ದಾಳೆ. ಇದರಿಂದಲೇ ತಿಳಿಯುತ್ತೇ ಆಕೆ ಏನು ಅನ್ನುವುದು. ಅವಳ ಈ ವರ್ತನೆಯಿಂದ ಹೆಣ್ಣು ಮಕ್ಕಳ ಮೇಲಿನ ಗೌರವಕ್ಕೂ ದಕ್ಕೆ ಬರುತ್ತಿದೆ’ ಎಂದು ಹೇಳಿದ್ದರು.


ಅವರ ಈ ಮಾತಿನಿಂದ ಕೋಪಗೊಂಡ ನಟಿ ಶ್ರೀರೆಡ್ಡಿ ನಿರ್ದೇಶಕ ವರಾಹಿ ತನ್ನನ್ನು ವೇಶ್ಯೆ ಎಂದು ಜರಿದಿದ್ದಾರೆ ಎಂದು ಆರೋಪಿಸಿ ನಿರ್ದೇಶಕರ ವಿರುದ್ಧ ಚೆನ್ನೈ ಪೊಲೀಸ್ ಕಮಿಷನರ್ ಬಳಿ ದೂರು ನೀಡಿದ್ದಾರಂತೆ. ಹಾಗೇ ಈ ವಿಷಯವನ್ನು ತನ್ನ ಫೇಸ್ ಬುಕ್ ನಲ್ಲಿಯೂ ಬರೆದುಕೊಂಡು, ಮತ್ತೊಮ್ಮೆ ಈ ರೀತಿಯ ಮಾತುಗಳನ್ನಾಡಿದರೆ ಕಪಾಳಕ್ಕೆ ಹೊಡೆಯುವುದಾಗಿ ಎಚ್ಚರಿಕೆ ನೀಡಿದ್ದಾರಂತೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಕ್ ಜನ್ಮದಿನದಂದು ಮದುವೆಯಾಗಲಿರುವ ಪ್ರಿಯಾಂಕ-ನಿಕ್ ಜೋಡಿ