Select Your Language

Notifications

webdunia
webdunia
webdunia
webdunia

ಸೈರಾ ನರಸಿಂಹ ರೆಡ್ಡಿ ಚಿತ್ರದ ಶೂಟಿಂಗ್ ಸೆಟ್ ಅನ್ನು ಆದಾಯ ಇಲಾಖೆ ಅಧಿಕಾರಿಗಳು ಧ್ವಂಸಗೊಳಿಸಿದ್ಯಾಕೆ?

ಸೈರಾ ನರಸಿಂಹ ರೆಡ್ಡಿ ಚಿತ್ರದ ಶೂಟಿಂಗ್ ಸೆಟ್ ಅನ್ನು ಆದಾಯ ಇಲಾಖೆ ಅಧಿಕಾರಿಗಳು ಧ್ವಂಸಗೊಳಿಸಿದ್ಯಾಕೆ?
ಹೈದರಾಬಾದ್ , ಗುರುವಾರ, 2 ಆಗಸ್ಟ್ 2018 (07:22 IST)
ಹೈದರಾಬಾದ್ : ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕಾಗಿ ನಿರ್ಮಿಸಿದ ಶೂಟಿಂಗ್ ಸೆಟ್ ಅನ್ನು ಆದಾಯ ಇಲಾಖೆ ಅಧಿಕಾರಿಗಳು ಧ್ವಂಸಗೊಳಿಸಿದ್ದಾರಂತೆ.


ಬಿಗ್​ ಬಜೆಟ್​ನಲ್ಲಿ ನಿರ್ಮಿಸಲಾಗುತ್ತಿರುವ ಚಿರಂಜೀವಿ ಅವರ ಸೈರಾ ನರಸಿಂಹ ರೆಡ್ಡಿ ಚಿತ್ರದ ಶೂಟಿಂಗ್ ಸಿರಿಲಿಂಗಂಪಲ್ಲಿ ಎಂಬಲ್ಲಿ ನಡೆಯುತ್ತಿತ್ತು. ಚಿತ್ರದ ಶೂಟಿಂಗ್ ಗಾಗಿ  ಬಿಗ್​ ಸೆಟ್ ಕೂಡ ನಿರ್ಮಿಸಲಾಗಿತ್ತು. ಆದರೆ, ಆ ಸ್ಥಳದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಆದಾಯ ಇಲಾಖೆಯ ಅನುಮತಿ ಪಡೆಯದ ಕಾರಣ ಇಲಾಖೆಯ  ಅಧಿಕಾರಿಗಳು ಶೂಟಿಂಗ್​ ಸೆಟ್ ಅನ್ನು ನೆಲಸಮ ಮಾಡಿದ್ದಾರಂತೆ.


ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, “ಈ ಹಿಂದೆ ರಂಗಸ್ಥಳಂ ಚಿತ್ರದ ಶೂಟಿಂಗ್​ ಇದೇ ಜಾಗದಲ್ಲಿ ನಡೆದಿತ್ತು. ಅಂದು ಅನುಮತಿ ಪಡೆಯಲಾಗಿತ್ತು. ಆದರೆ, ಸದ್ಯ ನಡೆಯುತ್ತಿರುವ ಶೂಟಿಂಗ್​ಗೆ ಹೊಸ ಅನುಮತಿ ಪಡೆದಿಲ್ಲ” ಎಂದಿದ್ದಾರೆ. ಆದರೆ ಚಿತ್ರದ ನಿರ್ಮಾಪಕರು, ‘ಈ ಜಮೀನನ್ನು ಮಾಲೀಕನಿಂದ ಲೀಸ್​ಗೆ ಪಡೆದಿದ್ದೇವೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಅಭಿಮಾನಿಗಳ ಮುಖಕ್ಕೆ ಆ್ಯಸಿಡ್​ ಹಾಕುವುದಾಗಿ ವಾರ್ನ್ ಮಾಡಿದ ರಶ್ಮಿಕಾ