Select Your Language

Notifications

webdunia
webdunia
webdunia
webdunia

'ರಂಗಸ್ಥಲಂ' ಚಿತ್ರದ ಬಗ್ಗೆ ಪವನ್ ಕಲ್ಯಾಣ್ ಹೇಳಿದ್ದೇನು ಗೊತ್ತಾ..?

'ರಂಗಸ್ಥಲಂ' ಚಿತ್ರದ ಬಗ್ಗೆ ಪವನ್ ಕಲ್ಯಾಣ್  ಹೇಳಿದ್ದೇನು ಗೊತ್ತಾ..?
ಹೈದರಾಬಾದ್ , ಗುರುವಾರ, 19 ಏಪ್ರಿಲ್ 2018 (14:34 IST)
ಹೈದರಾಬಾದ್ : ಮಾರ್ಚ್ 30 ರಂದು ಬಿಡುಗಡೆಯಾದ ರಾಮ್ ಚರಣ್ ತೇಜ್ ಅವರು ಅಭಿನಯಿಸಿದ್ದ 'ರಂಗಸ್ಥಲಂ' ಚಿತ್ರ ಬಿಡುಗಡೆಯಾದ ಮೊದಲ ದಿನವೇ ಭಾರೀ ಮೊತ್ತದ ಹಣ ಗಳಿಸುವುದರ ಜೊತೆಗೆ  ಜನರ ಮೆಚ್ಚುಗೆ ಕೂಡ ಪಡೆದಿತ್ತು.


ಈ ಚಿತ್ರದ ಬಗ್ಗೆ ಇದೀಗ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್  ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಪವನ್ ಕಲ್ಯಾಣ್ ಅವರು" ರಂಗಸ್ಥಲಂ ಸಿನಿಮಾ ಅದ್ಭುತವಾಗಿದೆ. ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಮಾಡಬಹುದಾದ ಎಲ್ಲಾ ಅರ್ಹತೆಗಳನ್ನು ಈ ಚಿತ್ರ ಹೊಂದಿದೆ" ಎಂದು ತಿಳಿಸಿದ್ದಾರೆ.


 ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ಮೂಡಿಬಂದ ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ರಾಮ್‍ಚರಣ್ ಗೆ ಜೋಡಿಯಾಗಿ ಸಮಂತಾ ಅಕ್ಕಿನೇನಿ ನಟಿಸಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತವಿದ್ದು, ನವೀನ್ ಯೆರ್ಮಿನಿ, ರವಿ ಶಂಕರ್ ಮತ್ತು ಮೋಹನ್ ಚೆರುಕುರಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೆಕಪ್ ಮೆನ್ ಗೆ ಸರ್ಪೈಸ್ ಆಗಿ ದುಬಾರಿ ಗಿಫ್ಟ್ ಕೊಟ್ಟ ನಟಿ ಜಾಕ್ವೆಲಿನ್ ಫರ್ನಾಂಡಿಸ್