Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ್ ರಲ್ಲಿ ನಟಿ ಅಪೂರ್ವ ಕ್ಷಮೆ ಕೇಳಿದ್ದು ಯಾಕೆ..?

ಪವನ್ ಕಲ್ಯಾಣ್ ರಲ್ಲಿ ನಟಿ ಅಪೂರ್ವ ಕ್ಷಮೆ ಕೇಳಿದ್ದು ಯಾಕೆ..?
ಹೈದರಾಬಾದ್ , ಬುಧವಾರ, 18 ಏಪ್ರಿಲ್ 2018 (06:17 IST)
ಹೈದರಾಬಾದ್ : ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ ಅವರ ವಿರುದ್ದ ನಟಿ ಶ್ರುತಿ ಅವರು ಹೇಳಿಕೆಯೊಂದನ್ನು ನೀಡಿದ್ದು, ಈ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದೀಗ ಮತ್ತೊಬ್ಬ ನಟಿ ಈ ಬಗ್ಗೆ ಪವನ್ ಕಲ್ಯಾಣ ಅವರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.


ಇತ್ತೀಚಿಗಷ್ಟೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ನಟಿ ಶ್ರುತಿ ಅವರು ''ಪವನ್ ಕಲ್ಯಾಣ್ ಅವರು ಅಭಿಮಾನಿಗಳಿಗೆ ಏನೂ ಮಾಡಿಲ್ಲ. ಅಭಿಮಾನಿಗಳನ್ನ ಬಳಸಿಕೊಂಡು ರಾಜಕೀಯ ಪ್ರವೇಶ ಮಾಡಿದ್ದಾರೆ. ಬೆಂಗಾಳಿ ಹುಡುಗಿಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಾರೆ'' ಎಂದು ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಇಂಡಸ್ಟ್ರಿಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.


ಆದರೆ ಇದೀಗ ನಟಿ ಅಪೂರ್ವ ಅವರು ಈ ಕುರಿತು ಮಾತಾಡಿ, ''ನಮ್ಮ ಹೋರಾಟ ಈ ಸಮಸ್ಯೆಯ ವಿರುದ್ಧ ಮಾತ್ರ. ಇಲ್ಲಿ ಯಾರ ವೈಯಕ್ತಿಕ ವಿಚಾರಗಳು ಬೇಡ. ಅವರೆಲ್ಲರ ಪರವಾಗಿ ನಾನು ಪವನ್ ಕಲ್ಯಾಣ್ ಅವರಿಗೆ ಕ್ಷಮೆ ಕೇಳುತ್ತಿದ್ದೇನೆ. ಯಾಕಂದ್ರೆ, ಅವರ ಮಾನವೀಯತೆ ಬಗ್ಗೆ ಅವರೆಲ್ಲರಿಗಿಂತ ನನಗೆ ಚೆನ್ನಾಗಿ ಗೊತ್ತಿದೆ. ಯಾರಿಗಾದರೂ ಸಮಸ್ಯೆ ಅಂದ್ರೆ, ಪವನ್ ಕಲ್ಯಾಣ್ ಮೊದಲು ಬರ್ತಾರೆ'' ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ತಮ್ಮ ಅಭಿಮಾನಿಗೆ ಬೈದಿದ್ದಾದರೂ ಯಾಕೆ?