Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆ ಮೂಗು ಕತ್ತರಿಸುತ್ತೇವೆ: ಕರ್ಣಿ ಸಂಘಟನೆ ಮುಖಂಡ

ದೀಪಿಕಾ ಪಡುಕೋಣೆ ಮೂಗು ಕತ್ತರಿಸುತ್ತೇವೆ: ಕರ್ಣಿ ಸಂಘಟನೆ ಮುಖಂಡ
ಜೈಪುರ್ , ಗುರುವಾರ, 16 ನವೆಂಬರ್ 2017 (15:34 IST)
ವಿವಾದಾತ್ಮಕ ಪದ್ಮಾವತಿ ಚಿತ್ರ ಬಿಡುಗಡೆಯಾದಲ್ಲಿ ಚಿತ್ರದ ನಾಯಕಿಯಾದ ದೀಪಿಕಾ ಪಡುಕೋಣೆಯ ಮೂಗು ಕತ್ತರಿಸುತ್ತೇವೆ ಎಂದು ರಜಪೂತ್ ಕರಣಿ ಸಂಘಟನೆ ಮುಖಂಡ ಲೋಕೇಂದ್ರ ಸಿಂಗ್ ಗುಡುಗಿದ್ದಾರೆ.
ದೇಶಾದ್ಯಂತ ಚಿತ್ರ ಬಿಡುಗಡೆಯಾದಲ್ಲಿ ರಾಮಾಯಣದಲ್ಲಿ ಶೂರ್ಪನಕಿ ಮೂಗು ಕತ್ತರಿಸಿದ ಹಾಗೆ ದೀಪಿಕಾಳ ಮೂಗು ಕತ್ತರಿಸುತ್ತೇವೆ ಎಂದು ಸಂಘಟನೆ ಮುಖಂಡರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
 
ಹಿಂದಿ ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಐತಿಹಾಸಿಕ ಚಿತ್ರ "ಪದ್ಮಾವತಿ'ಗೆ ಬಹಿಷ್ಕಾರ ಹಾಕಿರುವ ಶ್ರೀ ರಜಪೂತ್‌ ಕರಣಿ ಸೇನಾ ಇದೀಗ ಚಿತ್ರದಲ್ಲಿ ಪದ್ಮಾವತಿ ಪಾತ್ರ ನಿರ್ವಹಿಸಿರುವ "ನಾಚ್‌ನೇವಾಲಿ' ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆ ಹಾಕಿದೆ.
 
ಈ ಮಧ್ಯೆ ಉತ್ತರಪ್ರದೇಶ ಸರ್ಕಾರ ಸಹ ಪದ್ಮಾವತಿ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಲೆಯಾಳಿ ಚಿತ್ರದತ್ತ ತುಪ್ಪದ ಬೆಡಗಿ ಹಾಟ್ ರಾಗಿಣಿಯ ಚಿತ್ತ