Select Your Language

Notifications

webdunia
webdunia
webdunia
webdunia

ಕೇರಳದ ನಿರಾಶ್ರಿತರ ನೆರವಿಗೆ ನಿಂತ ತಮಿಳಿನ ಸ್ಟಾರ್ ನಟ ಸಹೋದರರು

ಕೇರಳದ ನಿರಾಶ್ರಿತರ ನೆರವಿಗೆ ನಿಂತ ತಮಿಳಿನ ಸ್ಟಾರ್ ನಟ ಸಹೋದರರು
ಚೆನ್ನೈ , ಸೋಮವಾರ, 13 ಆಗಸ್ಟ್ 2018 (07:42 IST)
ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ ಮತ್ತು ಕಾರ್ತಿ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ಸಾಮಾಜಿಕ ಕೆಲಸದಲ್ಲೂ ಹೆಸರು ಮಾಡಿದ್ದಾರೆ. ಇದೀಗ ಈ ಸಹೋದರರಿಬ್ಬರು ಕೇರಳದ ಮಹಾಮಳೆಗೆ ನಲುಗಿದ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ.


ಹೌದು. ಕೇರಳದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಪ್ರವಾಹ ಉಂಟಾಗಿದ್ದು, ಹಲವಾರು ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಪ್ರವಾಹದಿಂದಾಗಿ ಕೇರಳದಲ್ಲಿ ಇದುವರೆಗೆ 29 ಮಂದಿ ಮೃತಪಟ್ಟಿದ್ದು, 50 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಇದನ್ನು ನೋಡಿದ ನಟ ಸೂರ್ಯ ಮತ್ತು ನಟ ಕಾರ್ತಿ ನಿರಾಶ್ರಿತರ ನೆರವಿಗೆ ಧನ ಸಹಾಯ ಮಾಡಿದ್ದಾರೆ.


ಇವರು ಕೇರಳ ಸಿಎಂ ಸಹಾಯ ನಿಧಿಗೆ 25 ಲಕ್ಷ ರೂಪಾಯಿ ನೀಡಿದ್ದಾರೆ. ತಾವು ಖುದ್ದಾಗಿ ರೂ. 25 ಲಕ್ಷ ಹಣ ನೀಡಿದ್ದೂ ಅಲ್ಲದೇ ಸಂತ್ರಸ್ತರ ನೆರವಿಗೆ ಎಲ್ಲರೂ ಕೈಜೋಡಿಸಬೇಕು ಅಂತಾ ಮನವಿ ಕೂಡ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತನ ಜೀವ ಉಳಿಸಲು ನಟಿ ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತೇ?