Select Your Language

Notifications

webdunia
webdunia
webdunia
webdunia

ಕನ್ನಡಿಗರ ಪರ ನಿಂತ ತಮಿಳು ನಟ ಸಿಂಬು!

ಕನ್ನಡಿಗರ ಪರ ನಿಂತ ತಮಿಳು ನಟ ಸಿಂಬು!
ಚೆನ್ನೈ , ಮಂಗಳವಾರ, 10 ಏಪ್ರಿಲ್ 2018 (07:06 IST)
ಚೆನ್ನೈ : ಕಾವೇರಿ ನದಿ ನೀರು ನಿರ್ವಹಣೆ ಮಂಡಳಿಯನ್ನು ಕೇಂದ್ರ ಸರಕಾರ ರಚಿಸಬೇಕು ಎಂದು ಆಗ್ರಹಿಸಿ ತಮಿಳುನಾಡು ನಡೆಸುತ್ತಿದ್ದ ಪ್ರತಿಭಟನೆಗೆ ತಮಿಳು ಚಿತ್ರರಂಗವು ಕೂಡ ಕೈಜೋಡಿಸಿತ್ತು. ಆದರೆ ತಮಿಳು ನಟರೊಬ್ಬರು ಮಾತ್ರ ಕನ್ನಡಿಗರಿಗೆ ಬೆಂಬಲ ಸೂಚಿಸಿದ್ದಾರೆ.


ತಮಿಳು ನಟ ಸಿಂಬು ಅವರು ಈ ಪ್ರತಿಭಟನೆಯಲ್ಲಿ ಕನ್ನಡಿಗರ ಪರವಾಗಿ ನಿಂತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,’ಕರ್ನಾಟಕದ ಜನತೆಗೆ ಕುಡಿಯಲು ನೀರಿಲ್ಲ ಸ್ವಾಮಿ, ಅವರಿಗೆ ಇಲ್ಲ ಎಂದ್ಮೇಲೆ  ನಮಗೆಲ್ಲಿಂದ ಕೊಡ್ಬೇಕು’ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಇಡೀ ತಮಿಳುನಾಡು ಕನ್ನಡಿಗರ ಮೇಲೆ ಹರಿಹಾಯ್ದರೆ ಸಿಂಬು ಅವರು ಮಾತ್ರ ಕನ್ನಡಿಗರ ಪರ ನ್ಯಾಯಯುತವಾಗಿ ಮಾತನಾಡಿದ್ದು ಕನ್ನಡಿಗರಿಗೆ ಸಂತೋಷ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಸೆಮಣೆ ಏರಲು ರೆಡಿಯಾದ ಸ್ಯಾಂಡಲ್ ವುಡ್ ನ ಚಿರು- ಮೇಘನಾ ಜೋಡಿ