Webdunia - Bharat's app for daily news and videos

Install App

Sridevi: ನಟಿ ಶ್ರೀದೇವಿ ಪುಣ್ಯತಿಥಿ: ಅವರ ಸಾವು ಇಂದಿಗೂ ನಿಗೂಢ

Krishnaveni K
ಶನಿವಾರ, 24 ಫೆಬ್ರವರಿ 2024 (11:22 IST)
ಮುಂಬೈ: ಬಾಲಿವುಡ್ ನಟಿ, ಸಹಜ ಸುಂದರಿ ಶ್ರೀದೇವಿ ಕಪೂರ್ ಸಾವನ್ನಪ್ಪಿ ಇಂದಿಗೆ ಆರು ವರ್ಷವಾಗಿದೆ. ದಕ್ಷಿಣದಿಂದ ಬಾಲಿವುಡ್ ಗೆ ತೆರಳಿ ಹಿಂದಿ ಚಿತ್ರರಂಗವನ್ನೇ ಆಳಿದ್ದ ಶ್ರೀದೇವಿ ಸಾವು ಇಂದಿಗೂ ಒಂದು ಪ್ರಶ್ನೆಯಾಗಿ ಉಳಿದಿದೆ.

ದುಬೈಗೆ ನೆಂಟರ ಮದುವೆಯಲ್ಲಿ ಭಾಗಿಯಾಗಲು ತೆರಳಿದ್ದ ಶ್ರೀದೇವಿ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಆಗ ಅವರಿಗೆ ಕೇವಲ 54 ವರ್ಷ ವಯಸ್ಸು. ಅವರ ಸಾವು ಅಭಿಮಾನಿಗಳಿಗೆ ಶಾಕ್ ಆಗಿತ್ತು. ಬಾತ್ ಟಬ್ ನಲ್ಲಿ ಮುಳುಗಿದರೆ ಸಾಯಲು ಸಾಧ‍್ಯವಾ ಎಂದು ಅನೇಕರು ಅನುಮಾನಿಸುವಂತೆ ಮಾಡಿತ್ತು.

ಪತಿ ಬೋನಿ ಕಪೂರ್ ಪತ್ನಿಯ ಹಣಕ್ಕಾಗಿ ಕೊಲೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇನ್ನು ಕೆಲವರು ಶ್ರೀದೇವಿ ಕುಡಿತ ದಾಸಿಯಾಗಿದ್ದರು. ಹೀಗಾಗಿ ಮತ್ತಿನಲ್ಲಿ ನೀರಿಗೆ ಬಿದ್ದು ಸಾವನ್ನಪ್ಪಿದ್ದರು ಎಂದು ಸುದ್ದಿ ಮಾಡಿದರು. ಆದರೆ ಅವರ ಸಾವಿನ ತನಿಖೆ ಮಾಡಿದ್ದ ದುಬೈ ಪೊಲೀಸರು ಇದು ಸಹಜ ಸಾವೆಂದು ಷರಾ ಬರೆದರು. ಅದಾದ ಬಳಿಕ ಬೋನಿ ಕಪೂರ್ ಮೇಲಿನ ಆಪಾದನೆಗಳು ದೂರವಾದವು. ಆದರೆ ಅವರ ಅಪ್ಪಟ ಅಭಿಮಾನಿಗಳಿಗೆ ಇಂದಿಗೂ ಅವರ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.

ಶ್ರೀದೇವಿಗೆ ಮೇಕಪ್ ಮೇಲೆ ತುಂಬಾ ಇಷ್ಟವಿತ್ತು. ಇದೇ ಕಾರಣಕ್ಕೆ ಅವರ ಅಂತ್ಯಕ್ರಿಯೆ ವೇಳೆ ಮೇಕಪ್ ಹಾಕಿಸಿಯೇ ಅವರ ಅಂತ್ಯಕ್ರಿಯೆ ಮಾಡಲಾಯಿತು. ಅವರ ಸಾವಿನ ಬಳಿಕ ಪುತ್ರಿ ಜಾಹ್ನವಿ ಕಪೂರ್ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ತಾಯಿಯ ಹೆಸರು ಉಳಿಸುವಂತೆ ಜಾಹ್ನವಿ ಕೂಡಾ ಹಿಂದಿ ಮಾತ್ರವಲ್ಲದೇ ದಕ್ಷಿಣದ ಸಿನಿಮಾಗಳಿಗೂ ಲಗ್ಗೆಯಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments