Webdunia - Bharat's app for daily news and videos

Install App

ತನುಶ್ರೀ ದತ್ತಾ ಅವರ #ಮಿಟೂ ಚಳುವಳಿಯನ್ನು ಬೆಂಬಲಿಸಿದ ರಣವೀರ್ ಸಿಂಗ್...

Webdunia
ಸೋಮವಾರ, 8 ಅಕ್ಟೋಬರ್ 2018 (14:18 IST)
ಚಿತ್ರರಂಗವು ಕೆಲಸ ಮಾಡಲು ಸುರಕ್ಷಿತವೇ ಅಥವಾ ಅಲ್ಲವೇ ಎಂಬುದರ ಕುರಿತು ನಡೆಯುತ್ತಿರುವ ಚರ್ಚೆಯ ಕುರಿತು ರಣವೀರ್ ಸಿಂಗ್ ತಮ್ಮ ಮೌನವನ್ನು ಮುರಿದಿದ್ದಾರೆ. ಇಡೀ ಚಿತ್ರರಂಗ ತನುಶ್ರೀ ದತ್ತಾ ಮತ್ತು ನಾನಾ ಪಾಟೇಕರ್ ಅವರ ಕುರಿತು ಮಾತನಾಡುತ್ತಿದ್ದು ಚಿತ್ರರಂಗವು ಕೆಲಸ ಮಾಡಲು ಸುರಕ್ಷಿತವೇ ಅಥವಾ ಅಲ್ಲವೇ ಎಂಬುದೂ ಸಹ ಚರ್ಚೆಯ ವಿಷಯಾಗಿದೆ. ರಣವೀರ್ ಅಂತಿಮವಾಗಿ ತಮ್ಮ ಮೌನವನ್ನು ಮುರಿದಿದ್ದು ಈ ಕುರಿತಂತೆ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಹೆಸರುಗಳನ್ನು ತೆಗೆದುಕೊಳ್ಳಲು ಮತ್ತು ಯಾರಿಗಾದರೂ ಬೆಂಬಲವನ್ನು ಸೂಚಿಸಲು ರಣವೀರ್ ನಿರಾಕರಿಸಿದರೂ ಅಂತರ್ಜಾಲದಲ್ಲಿ ಪ್ರಸಾರವಾಗುತ್ತಿರುವ ವರದಿಗಳನ್ನು ಉಲ್ಲೇಖಿಸುತ್ತಾ, 'ಲಿಂಗವನ್ನು ಹೊರತುಪಡಿಸಿ ಕಿರುಕುಳ ತಪ್ಪಾಗಿದೆ ಮತ್ತು ಅದು ನಿಜವಾಗಿ ಸಂಭವಿಸಿದ್ದಲ್ಲಿ ಆ ವ್ಯಕ್ತಿಯು ಮುಕ್ತವಾಗಿ ಹೊರಬಂದು ಅದರ ಕುರಿತು ಮಾತನಾಡಲು ಸಾಕಷ್ಟು ಧೈರ್ಯವನ್ನು ತೆಗೆದುಕೊಳ್ಳುತ್ತಾನೆ' ಎಂದು ರಣವೀರ್ ಸಿಂಗ್ ಭಾವಿಸುತ್ತಾರೆ.
 
"ಮಹಿಳೆ, ಪುರುಷ, ಯಾವುದೇ ವ್ಯಕ್ತಿ ಕಿರುಕುಳಕ್ಕೊಳಗಾಗುವುದು ತಪ್ಪು, ಅದು ಕೆಲಸದ ಸ್ಥಳದಲ್ಲಿ, ಸಾರ್ವಜನಿಕವಾಗಿ ಅಥವಾ ಮನೆಯಲ್ಲೇ ಆಗಿರಬಹುದು. ಇದೀಗ ಇವೆಲ್ಲಾ ಉಹಾಪೋಹಗಳಾಗಿವೆ. ಆದರೆ ಇದು ಸಂಭವಿಸಿದ್ದರೆ, ಅದನ್ನು ಸಾರ್ವಜನಿಕವಾಗಿ ಹೇಳಲು ಧೈರ್ಯವನ್ನು ತೆಗೆದುಕೊಳ್ಳುತ್ತದೆ. ನಾನು ಅದನ್ನು ಖಂಡಿತವಾಗಿ ಖಂಡಿಸುತ್ತೇನೆ" ಎಂದು ಡೆಲ್ಲಿಯಲ್ಲಿ ಮಾಧ್ಯಮದ ಮುಂದೆ ಹೇಳಿದ್ದಾರೆ. ದೀಪಿಕಾ ಸಹ ಈ ಕುರಿತು ರಣವೀರ್ ಅವರ ಮಾತುಗಳಿಗೆ ಮತ್ತಷ್ಟು ಪುಷ್ಟಿಯನ್ನು ನೀಡಿದರು. #ಮಿಟೂ ಚಳುವಳಿ ಪುರುಷ v/s ಮಹಿಳೆ ಕುರಿತಾಗಿ ಅಲ್ಲ, ಇದು ಸರಿ v/s ತಪ್ಪಿನ ಕುರಿತಾದುದು ಮತ್ತು ಏನಾದರೂ ತಪ್ಪು ನಡೆದಿದ್ದರೆ ನಾವೆಲ್ಲರೂ ಸೇರಿ ಅದನ್ನು ಅಂತ್ಯಗೊಳಿಸಬೇಕಾಗಿದೆ ಎಂದು ದೀಪಿಕಾ ತಮ್ಮ ವಿಚಾರವನ್ನು ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ನಟ ದರ್ಶನ್ ಗೆ ಈಗ ಎಲ್ಲೇ ಹೋದ್ರೂ ವೈಫು ವಿಜಿ ಜೊತೆಗಿರಲೇಬೇಕು

Prithvi Bhat marriage Audio viral: ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಗಾಯಕಿ ಪೃಥ್ವಿ ಭಟ್: ಮನೆಯವರಿಂದ ಗಂಭೀರ ಆರೋಪ

Rocking star Yash: ಉಜ್ಜೈನಿ ಮಹಾಕಾಳನಿಗೆ ಪೂಜೆ ಸಲ್ಲಿಸಿದ ರಾಕಿಂಗ್ ಸ್ಟಾರ್ ಯಶ್: ಹಿಂದಿಯಲ್ಲಿ ಮಾತನಾಡಿದ ವಿಡಿಯೋ

ಇಟಲಿಯ ಉದ್ಯಮಿಯೊಂದಿಗೆ ಉಂಗುರ ಬದಲಾಯಿಸಿಕೊಂಡ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

Drug Case:ನಟಿ ನೀಡಿದ ದೂರಿನಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್‌

ಮುಂದಿನ ಸುದ್ದಿ
Show comments