Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ ಹತ್ಯೆಗೆ ಮೂವರಿಂದ ಸಂಚು ; ಸ್ಪೋಟಕ ಮಾಹಿತಿ ಬಹಿರಂಗ

ಪವನ್ ಕಲ್ಯಾಣ ಹತ್ಯೆಗೆ ಮೂವರಿಂದ ಸಂಚು ; ಸ್ಪೋಟಕ ಮಾಹಿತಿ ಬಹಿರಂಗ
ಹೈದರಾಬಾದ್ , ಶನಿವಾರ, 29 ಸೆಪ್ಟಂಬರ್ 2018 (09:05 IST)
ಹೈದರಾಬಾದ್ : ಟಾಲಿವುಡ್ ನ ನಟ, ರಾಜಕಾರಣಿ ಪವರ್ ಸ್ಟಾರ್ ಪವನ್ ಕಲ್ಯಾಣ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಭಯಾನಕ ವಿಚಾರವನ್ನು ಸ್ವತಃ ಪವನ್ ಅವರೇ ಬಹಿರಂಗಪಡಿಸಿದ್ದಾರೆ.


ಗುರುವಾರ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲುರು ಹಳೆಯ ಬಸ್​ ನಿಲ್ದಾಣದ ಬಳಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ನನ್ನನ್ನು ಹತ್ಯೆ ಮಾಡಲು ಮೂರು ಜನ ನಡೆಸಿದ ಸಂಭಾಷಣೆಯ ಆಡಿಯೋ ತುಣುಕು ನಂಗೆ ಸಿಕ್ಕಿತ್ತು. ಆ ಮೂರು ಜನ ಯಾರೂ ( ಯಾವ ಪಾರ್ಟಿ ) ಅಂತಾ ಗೊತ್ತಿಲ್ಲ. ಆದರೆ, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸದಂತೆ ನೋಡಿಕೊಳ್ಳುವುದು ಅವರ ಉದ್ದೇಶವಾದಂತೆ ಕಾಣುತ್ತದೆ ಎಂದು ಪವನ್ ಹೇಳಿಕೊಂಡಿದ್ದಾರೆ.


ಹಾಗೇ ಇಂತಹ ಗೊಡ್ಡು ಬೆದರಿಕೆಗಳಿಗೆ ಅಂಜುವುದಿಲ್ಲ. ನಾನು ಜನರ ಸೇವೆಗೆ ಜೀವನವನ್ನು ಮುಡಿಪಾಗಿಡುತ್ತೇನೆ. ಜನರಿಗಾಗಿಯೇ ರಾಜಕೀಯಕ್ಕೆ ಧುಮುಕಿದ್ದೇನೆ ಎಂದು ಪವರ್​ ಸ್ಟಾರ್ ಹೇಳಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

'ಸೈರಾ ನರಸಿಂಹ ರೆಡ್ಡಿ' ಚಿತ್ರದ ಶೂಟಿಂಗ್ ವೇಳೆ ಅವಘಡ ; ಅಪಾಯದಿಂದ ಪಾರಾದ ನಟ ಕಿಚ್ಚ ಸುದೀಪ್