Webdunia - Bharat's app for daily news and videos

Install App

ಹೊಸ ಕಾರ್ಯಕ್ರಮದೊಂದಿಗೆ ಕಿರುತೆರೆಗೆ ಮತ್ತೆ ಕಪಿಲ್ ಶರ್ಮಾ ಎಂಟ್ರಿ

ರಾಮಕೃಷ್ಣ ಪುರಾಣಿಕ
ಗುರುವಾರ, 8 ಫೆಬ್ರವರಿ 2018 (16:05 IST)
ಹೊಚ್ಚ ಹೊಸ ಟಿವಿ ಕಾರ್ಯಕ್ರಮದ ಮೂಲಕ ಮಾರ್ಚ್‌ನಲ್ಲಿ ಕಿರುತೆರೆಗೆ ಮರಳಲಿದ್ದಾರೆ ಕಾಮಿಡಿ ಕಿಂಗ್ ಕಪಿಲ್ ಶರ್ಮಾ. ತಮ್ಮದೇ ಆದ ಶೈಲಿಯಲ್ಲಿ ತಮ್ಮ ಅಭಿಮಾನಿ ಪ್ರೇಕ್ಷಕರನ್ನು ಮನರಂಜಿಸಲು ಸ್ಥಗಿತಗೊಂಡಿದ್ದ "ದಿ ಕಪಿಲ್ ಶರ್ಮಾ ಶೋ" ದ ಹೊಸ ಆವೃತ್ತಿಯ ಮೂಲಕ ಹೊಸ ರೂಪದಲ್ಲಿ ಕಿರುತೆರೆಗೆ ಮರಳಲಿದ್ದಾರೆ. ಈ ಕುರಿತು ಸೋನಿ ಟಿವಿ ಮತ್ತು ಕಪಿಲ್ ನಡುವೆ ಇತ್ತೀಚಿಗೆ ಚರ್ಚೆ ನಡೆದಿದ್ದು ಕಪಿಲ್ ಕಮ್‌ಬ್ಯಾಕ್ ಮಾಡಲು ಉತ್ಸುಕರಾಗಿದ್ದಾರೆ. ಕಪಿಲ್ ತಮ್ಮ ಹೊಸ ಶೋನೊಂದಿಗೆ ಹೊಸ ಆರಂಭವನ್ನು ಪಡೆಯಲು ಸಜ್ಜಾಗಿದ್ದಾರೆ.
ಕಪಿಲ್ ಅವರ ಆರೋಗ್ಯ ಸಮಸ್ಯೆಗಳು ಮತ್ತು ಮಾಜಿ ಸಹೋದ್ಯೋಗಿ ಸುನೀಲ್ ಗ್ರೋವರ್ ಅವರ ನಡುವಿನ ವಾಗ್ವಾದದಿಂದಾಗಿ ಕಪಿಲ್ ಅವರ ಹಾಸ್ಯ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ತದನಂತರ, ಸಹ-ಹಾಸ್ಯನಟರಾದ ಚಂದನ್ ಪ್ರಭಾಕರ್, ಅಲಿ ಅಸ್ಗರ್ ಮತ್ತು ಸುಗಂಧ ಮಿಶ್ರಾ ಅವರು ಸುನಿಲ್‌ಗೆ ಬೆಂಬಲವಾಗಿ ಈ ಕಾರ್ಯಕ್ರಮವನ್ನು ತೊರೆದಿದ್ದರು. 
 
ತನ್ನ "ದ ಕಪಿಲ್ ಶರ್ಮಾ ಶೋ" ಸ್ಥಗಿತಗೊಂಡಿದ್ದು ಮತ್ತು ತಾನು ನಟಿಸಿದ ಚಲನಚಿತ್ರ ಫಿರಂಗಿ ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಕಮಾಯಿ ಮಾಡಿದ್ದ ಕಾರಣ ಈ ಹಾಸ್ಯನಟನಿಗೆ 2017 ತುಂಬಾ ದುರದೃಷ್ಟ ವರ್ಷವಾಗಿತ್ತು. ಕಪಿಲ್ ಶರ್ಮಾ ಈ ಕಠಿಣ ಮನಃಸ್ಥಿತಿಯಿಂದ ಹೊರಬಂದಂತಿದೆ ಮತ್ತು ಈಗ ಅವರು ತಮ್ಮ ಹೊಸ ಕಾರ್ಯಕ್ರಮದ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದಾರೆ, ಶೀಘ್ರದಲ್ಲೇ ಹೊಸ ಕಾರ್ಯಕ್ರಮವು ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ.
 
ಸುನೀಲ್ ಗ್ರೋವರ್ ಕೂಡಾ ಕಪಿಲ್ ಅವರ ಹೊಸ ಕಾರ್ಯಕ್ರಮದಲ್ಲಿ ಹಿಂತಿರುಗಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ, "ಇಲ್ಲ, ಈ ಕಾರ್ಯಕ್ರಮದಲ್ಲಿ ಸುನೀಲ್ ಅವರು ಇರುವುದಿಲ್ಲ. ಕಪಿಲ್ ಶರ್ಮಾ ಶೋನ ಉಳಿದ ಸಹನಟರು ಈ ಹೊಸಕಾರ್ಯಕ್ರಮದಲ್ಲಿ ಮುಂದುವರಿಯಲಿದ್ದಾರೆ, ಕೆಲವು ಹೊಸ ಸೇರ್ಪಡೆಗಳು ಕೂಡಾ ಇರಬಹುದು. ಕಾರ್ಯಕ್ರಮದ ಹೆಸರು ಇನ್ನೂ ಅಂತಿಮವಾಗಿಲ್ಲ. ಆದರೆ ಕಪಿಲ್ ಮತ್ತು ತಂಡದವರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ" ಎಂದು ಸುದ್ದಿ ಮೂಲಗಳು ತಿಳಿಸಿವೆ.
 
ಏನೇ ಇರಲಿ, ಕಪಿಲ್ ಅವರನ್ನು ಅಭಿಮಾನಿಗಳು ಮತ್ತೆ ಕಿರುತೆರೆಯಲ್ಲಿ ನೋಡಲು ಉತ್ಸುಕರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments