Webdunia - Bharat's app for daily news and videos

Install App

ಶಾರುಕ್ ಖಾನ್ ಬಗ್ಗೆ ಅಜಯ್ ದೇವಗನ್ ಹೇಳಿದ್ದೇನು ಗೊತ್ತಾ?

rajesh
ಗುರುವಾರ, 25 ಜನವರಿ 2024 (15:27 IST)
ಸಾಮಾನ್ಯವಾಗಿ ಕಾಜೋಲ್ ಮತ್ತು ಶಾರೂಖ್ ಅಭಿನಯದ ಚಿತ್ರಗಳು ಯಶಸ್ಸನ್ನು ಕಂಡಿವೆ. ತುಂಬಾ ಇಷ್ಟವಾದ ಜೋಡಿಗಳಲ್ಲಿ ಇದು ಸಹಿತ ಒಂದಾಗಿದ್ದು, ಪ್ರಸ್ತುತ ಇವರಿಬ್ಬರು  ರೋಹಿತ್ ಶೆಟ್ಟಿ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನನಗೆ ಶಾರುಖ್ ಮೇಲೆ ಎಂದಿಗೂ ಕೋಪವಿಲ್ಲ, ಬದಲಿಗೆ ಸಿಟ್ಟು ಬಂದಿದ್ದು ಆದಿತ್ಯ ಚೋಪ್ರ ಮೇಲೆ ಎಂದಿದ್ದಾರೆ. 
 
ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಮತ್ತು ಕಿಂಗ್ ಖಾನ್ ಶಾರುಖ್ ಖಾನ್ ಅವರು ಬಲ್ಗೇರಿಯಾದಲ್ಲಿ ಒಂದೇ ಟೇಬಲ್ ನಲ್ಲಿ ಕುಳಿತು ಪಾನಗೋಷ್ಠಿಯಲ್ಲಿ ನಿರತರಾಗಿರುವ ಫೋಟೋ ಈಗ ಎಲ್ಲೆಡೆ ಸಂಚಲನ ಉಂಟು ಮಾಡಿದೆ. 
 
ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಅಜಯ್ ಅವರು ಹೇಳಿದ್ದು ಏನು ಗೊತ್ತೇ ? ನಾನು ಮತ್ತು  ಶಾರುಖ್ ಸಹೋದ್ಯೋಗಿಗಳಷ್ಟೇ, ಉತ್ತಮ ಸ್ನೇಹಿತರಲ್ಲ. ಅನೇಕ ವರದಿಗಳು ಈ ತಾರ ಜೋಡಿಯ ಕೋಪ ತಣ್ಣಗಾಗಿದೆ ಎಂದು ಹೇಳಿದ್ದವು. ಅದಕ್ಕೆ  ಈ ಉತ್ತರ ನೀಡಿದ್ದಾರೆ ನಟ. 
 
ನಾವು ಎಲ್ಲಿಯೇ ಭೇಟಿಯಾದರೂ ಈ ರೀತಿಯ ವಾತಾವರಣ ಇರುತ್ತದೆ. ನಾವಿಬ್ಬರು ಉತ್ತಮ ಸ್ನೇಹಿತರಲ್ಲ, ಬದಲಿಗೆ ಸಹೋದ್ಯೋಗಿಗಳು ಎಂದಿದ್ದಾರೆ ಕಾಜೋಲ್ ಪತಿ ಅಜಯ್. 
 
ಇವರಿಬ್ಬರ ನಟನೆಯ ಚಿತ್ರಗಳ ಬಿಡುಗಡೆಗೆ ಸಂಬಂಧಪಟ್ಟಂತೆ ಗೊಂದಲ ಉಂಟಾಗಿತ್ತು. ಅಂದಿನಿಂದ ಅಜಯ್ ಅವರು ಶಾರುಖ್ ಬಗ್ಗೆ ಕೋಪಗೊಂಡಿದ್ದಾರೆ ಎನ್ನುವುದು ಮಾಧ್ಯಮಗಳ  ಮುಖ್ಯ ಸುದ್ದಿಗಳಲ್ಲಿ ಒಂದಾಗಿತ್ತು. ನಮ್ಮಿಬ್ಬರ ನಡುವೆ ಈಗ ಯಾವುದೇ ಭಿನ್ನತೆ ಭೇದ ಭಾವ ಇಲ್ಲ. ಆದಿಯ ಬಗ್ಗೆಯೂ ಸಹಿತ ಕೋಪವಿಲ್ಲ ಎಂದಿದ್ದಾರೆ ಅಜಯ್. 
 
 ಸುಖಾಸುಮ್ಮನೆ ಮಾಧ್ಯಗಳು ನಮ್ಮ ಬಗ್ಗೆ ಬರೆಯುತ್ತಿದ್ದಾರೆ ಎಂದು ಸಹಿತ ತಿಳಿಸಿದ್ದಾರೆ. ಅದು ಸತ್ಯ ಬಿಡಿ ಗಾಸಿಪ್ ಕಾಲಂ ತುಂಬಲು ಏನಾದರೊಂದು ಮಸಾಲೆ ಇರಲೇ ಬೇಕಲ್ಲ!

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments