Select Your Language

Notifications

webdunia
webdunia
webdunia
webdunia

ಪತಿ ರಾಜ್ ಕುಂದ್ರಾಗೆ ವಿಚ್ಛೇದನ ನೀಡಲು ತೀರ್ಮಾನಿಸಿದ್ದರಾ ಶಿಲ್ಪಾ ಶೆಟ್ಟಿ?!

ಪತಿ ರಾಜ್ ಕುಂದ್ರಾಗೆ ವಿಚ್ಛೇದನ ನೀಡಲು ತೀರ್ಮಾನಿಸಿದ್ದರಾ ಶಿಲ್ಪಾ ಶೆಟ್ಟಿ?!
ಮುಂಬೈ , ಸೋಮವಾರ, 18 ಮಾರ್ಚ್ 2019 (09:46 IST)
ಮುಂಬೈ: ಕರಾವಳಿ ಮೂಲದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಒಂದು ಕಾಲದಲ್ಲಿ ಪತಿ ರಾಜ್ ಕುಂದ್ರಾಗೆ ವಿಚ್ಛೇದನ ನೀಡಲು ಮುಂದಾಗಿದ್ದರಾ?!


ಅಚ್ಚರಿಯಾಗಬೇಡಿ, ಇಂತಹದ್ದೊಂದು ಸುದ್ದಿಯನ್ನು ಶಿಲ್ಪಾ ಶೆಟ್ಟಿ ತಾಯಿಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಮೊಬೈಲ್ ಸಂದೇಶದ ಮೂಲಕ ತಿಳಿಸಿ ಗಾಬರಿಹುಟ್ಟಿಸಿದ್ದರಂತೆ. ಆದರೆ ಇದೆಲ್ಲವೂ ಅನುರಾಗ್ ಮಾಡಿದ್ದು ತಮಾಷೆಗಾಗಿ! ಅಸಲಿಗೆ ಶಿಲ್ಪಾ-ರಾಜ್ ಚೆನ್ನಾಗಿಯೇ ಇದ್ದರು.

ಶಿಲ್ಪಾ ಫೋನ್ ತೆಗೆದುಕೊಂಡು ಅನುರಾಗ್ ಬಸು ಆಕೆಯೇ ಮೆಸೇಜ್ ಮಾಡುವಂತೆ ತಾಯಿಗೆ ನಾನು ಮತ್ತು ರಾಜ್ ಕುಂದ್ರಾ ನಡುವೆ ದೊಡ್ಡ ಜಗಳ ನಡೆದಿದೆ. ಹೀಗಾಗಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದೇವೆ ಎಂದು ಮೆಸೇಜ್ ಮಾಡಿದ್ದರಂತೆ. ಬಳಿಕ ಶಿಲ್ಪಾ ತಾಯಿ ಗಾಬರಿಯಾಗಿ ಫೋನ್ ಮಾಡಿದಾಗ ಇದೆಲ್ಲವೂ ಅನುರಾಗ್ ಬಸು ತಮಾಷೆಗಾಗಿ ಮಾಡಿದ್ದು. ನಾನೇ ಹೇಳುವವರೆಗೂ ಈ ರೀತಿ ನಾನು ಪ್ರೆಗ್ನೆಂಟ್, ಡಿವೋರ್ಸ್ ಪಡೆಯುತ್ತಿದ್ದೇನೆ ಎಂದೆಲ್ಲಾ ಯಾರಾದರೂ ಹೇಳಿದರೆ ನಂಬಬೇಡ ಎಂದು ತಿಳಿಹೇಳುವಲ್ಲಿ ಸಾಕಾಗಿ ಹೋಯಿತಂತೆ. ಇದೆಲ್ಲವನ್ನೂ ಶಿಲ್ಪಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ‘ಯುವರತ್ನ’ ನಾಯಕಿ ಸಯ್ಯೇಷಾ ಸಿನಿಮಾಗೇ ಗುಡ್ ಬೈ ಹೇಳ್ತಾರಾ?!