Select Your Language

Notifications

webdunia
webdunia
webdunia
Friday, 11 April 2025
webdunia

ಮತ್ತೆ 3 ಕೋಟಿ ರೂ. ದೇಣಿಗೆ ನೀಡಿದ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್
ಮುಂಬೈ , ಶುಕ್ರವಾರ, 10 ಏಪ್ರಿಲ್ 2020 (11:28 IST)
ಮುಂಬೈ: ಮೊನ್ನೆಯಷ್ಟೇ ಪ್ರಧಾನಿ ಪರಿಹಾರ ನಿಧಿಗೆ 25 ಕೋಟಿ ರೂ. ಪರಿಹಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈಗ ಮತ್ತೆ 3 ಕೋಟಿ ರೂ. ದೇಣಿಗೆ ನೀಡಿದ್ದಾರೆ.


ಈ ಬಾರಿ ಅಕ್ಷಯ್ ದೇಣಿಗೆ ನೀಡಿರುವುದು ಮುಂಬೈ ಮಹಾನಗರ ಪಾಲಿಕೆಗೆ. ಈ ಪರಿಹಾರ ಹಣವನ್ನು ಮಾಸ್ಕ್ ತಯಾರಿಕೆಗೆ ಮತ್ತು ಕೊರೋನಾ ಟೆಸ್ಟ್ ಕಿಟ್ ಖರೀದಿಗೆ ಬಳಸುವುದಾಗಿ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.

ಇದಲ್ಲದೆ ಸ್ಥಳೀಯರಿಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ನೀಡುವುದು, ಊಟ ಒದಗಿಸುವುದು ಇತ್ಯಾದಿ ಮೂಲಕ ಅಕ್ಷಯ್ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ವೇಳೆ ಬೀದಿಗಿಳಿದ ನಟ ಸಲ್ಮಾನ್ ಖಾನ್