Select Your Language

Notifications

webdunia
webdunia
webdunia
webdunia

ಆತ್ಮಹತ್ಯೆಗೆ ಯೋಚಿಸಿದ್ದ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್

rehman

Krishnaveni K

ಮುಂಬೈ , ಗುರುವಾರ, 11 ಜನವರಿ 2024 (11:56 IST)
ಮುಂಬೈ: ಸಂಗೀತ ಮಾಂತ್ರಿಕನೆಂದೇ ಜನಪ್ರಿಯರಾಗಿರುವ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಒಂದು ಸಮಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ!

ಖಾಸಗಿ ವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಎ.ಆರ್. ರೆಹಮಾನ್ ತಮ್ಮ ಬಾಲ್ಯದ ಕಷ್ಟದ ದಿನಗಳು, ಕುಟುಂಬದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಸಣ್ಣ ವಯಸ್ಸಿನಲ್ಲಿ ಅವರು ಒಮ್ಮೆ ಕಷ್ಟಗಳನ್ನು ಎದುರಿಸಲಾಗದೇ ಆತ್ಮಹತ್ಯೆಗೆ ಯೋಚಿಸಿದ್ದರಂತೆ. ಆದರೆ ಆಗ ಅವರ ತಾಯಿ ಕರೀಮಾ ಬೇಗಂ ನೀಡಿದ ಸಲಹೆಯೇ ಅವರ ಮನಸ್ಸು ಪರಿವರ್ತನೆಯಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.

ನಾವು ನಮಗಾಗಿ ಬದುಕುವುದನ್ನು ಬಿಟ್ಟು ಇನ್ನೊಬ್ಬರಿಗಾಗಿ ಬದುಕಲು ಕಲಿಯಬೇಕು ಎಂದು ಅಮ್ಮ ಹೇಳಿದರು. ನಮಗಾಗಿ ಬದುಕುವುದು ಸ್ವಾರ್ಥ. ಇನ್ನೊಬ್ಬರಿಗಾಗಿ ಸಹಾಯ ಮಾಡುವುದು, ಬದುಕಿದರೆ ನಮ್ಮಲ್ಲಿ ಸ್ವಾರ್ಥವಿರುವುದಿಲ್ಲ ಎಂದು ಹೇಳಿದ ಮಾತ ನನ್ನಲ್ಲಿ ಹೊಸ ಬದಲಾವಣೆ ತಂದಿತ್ತು ಎಂದು ರೆಹಮಾನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಕ್ಸಿಕ್ ನಲ್ಲಿ ಯಶ್ ಜೊತೆ ಕರೀನಾ? ಸುಳಿವು ಕೊಟ್ಟ ನಟಿ