Publish Date: Mon, 31 Dec 2018 (09:17 IST)
Updated Date: Mon, 31 Dec 2018 (09:21 IST)
ಬೆಂಗಳೂರು: ತಾನು ಮದುವೆಯಾಗುವ ಹುಡುಗಿ ನೋಡಲು ಸುಂದರವಾಗಿರಬೇಕು, ಹಾಗೇ ಮನಸ್ಸೂ ಸುಂದರವಾಗಿರಬೇಕು ಎಂದು ಎಲ್ಲಾ ಪುರುಷರೂ ಬಯಸುತ್ತಾರೆ. ಆದರೆ ಅದಕ್ಕೆ ಏನು ಮಾಡಬೇಕು ಗೊತ್ತಾ?
ಮದುವೆ, ಸಂತಾನ ಇತ್ಯಾದಿ ದೋಷಗಳಿಗೆ ಕಾರಣವಾಗುವುದು ಮಂಗಳನ ವಕ್ರ ದೃಷ್ಟಿ. ಇದಕ್ಕಾಗಿ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಬೇಕು ಎಂದು ಹಲವು ಬಾರಿ ನಾವು ಓದಿದ್ದೇವೆ.
ಅದರ ಜತೆಗೆ ಪ್ರತಿ ನಿತ್ಯ ಅಂಗಾರಕ ಸ್ತೋತ್ರ ಓದುವುದರಿಂದ ನಾವು ಬಯಸಿದಂತಹ ಸಂಗಾತಿ ನಮಗೆ ಸಿಗುತ್ತಾರೆ ಎನ್ನಲಾಗುತ್ತದೆ. ಇದರಿಂದ ಉತ್ತಮ ಸಂಗಾತಿ ಸಿಗುವುದಷ್ಟೇ ಅಲ್ಲ, ಈ ಸ್ತೋತ್ರ ಓದುವುದರಿಂದ ಮಾನಸಿಕ ನೆಮ್ಮದಿ, ಸಂತೋಷ, ವಿನಾಕಾರಣ ಅಪವಾದಕ್ಕೆ ಗುರಿಯಾಗುವುದು ಇತ್ಯಾದಿ ಕಿರಿ ಕಿರಿಗಳಿಂದಲೂ ಮುಕ್ತಿ ಪಡೆಯಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ