Select Your Language

Notifications

webdunia
webdunia
webdunia
webdunia

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

Sankranti festival

Krishnaveni K

ಬೆಂಗಳೂರು , ಬುಧವಾರ, 14 ಜನವರಿ 2026 (09:01 IST)
Photo Credit: Instagram
ಬೆಂಗಳೂರು: ಸಂಕ್ರಾಂತಿ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿದೆ. ಸಂಕ್ರಾಂತಿ ಹಬ್ಬದ ದಿನ ಈ ಮೂರು ವಸ್ತುಗಳನ್ನು ದಾನ ಮಾಡಲು ಮರೆಯಬೇಡಿ.

ಸಂಕ್ರಾಂತಿ ಎಂದರೆ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಕಾಲ. ದಕ್ಷಿಣಾಯನ ಮುಗಿದು ಉತ್ತರಾಯಣ ಕಾಲ ಶುರುವಾಗುತ್ತದೆ. ಈ ಸಂದರ್ಭದಲ್ಲಿ ಸಕಲ ದೋಷಗಳ ನಿವಾರಣೆಗೆ ಬಡವರಿಗೆ ದಾನ ಮಾಡುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ವಿಶೇಷವಾಗಿ ಇಂದು ಮೂರು ವಸ್ತುಗಳನ್ನು ದಾನ ಮಾಡಲು ಮರೆಯಬೇಡಿ ಎಳ್ಳು, ಬೆಲ್ಲ ಮತ್ತು ಮೊಸರು. ಇದಕ್ಕೆ ಕಾರಣವೂ ಇದೆ.
ಎಳ್ಳು ದಾನ: ಕಪ್ಪು ಎಳ್ಳು ದಾನ ಮಾಡುವುದರಿಂದ ಪಾಪ ತೊಡೆದು ಹೋಗುವುದು. ಜೊತೆಗೆ ಸಂಪತ್ತು  ವೃದ್ಧಿಯಾಗಿ ಹಿರಿಯರ ಆಶೀರ್ವಾದ ಸಿಗುವುದು.

ಬೆಲ್ಲ: ಬೆಲ್ಲವನ್ನು ದಾನ ಮಾಡುವುದರಿಂದ ಜೀವನದಲ್ಲಿ ಅದೃಷ್ಟ, ಸಂತೋಷ ಸಿಗುತ್ತದೆ.
ಮೊಸರು: ಮನೆಯಲ್ಲಿ ದಾರಿದ್ರ್ಯ, ಹಣಕಾಸಿನ ತಾಪತ್ರಯಗಳು ದೂರವಾಗಬೇಕಾದರೆ ಮೊಸರು ದಾನ ಮಾಡಬೇಕು.

ಇದರ ಜೊತೆಗೆ ಇಂದು ಕುಂಬಳಕಾಯಿ, ಕಂಬಳಿ,ತುಪ್ಪ, ಹಸಿರು ಬಣ್ಣದ ಬಳೆ ದಾನ ಮಾಡುವುದೂ ಅತ್ಯಂತ ಶ್ರೇಯಸ್ಕರ ಎಂದು ನಂಬಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ