Webdunia - Bharat's app for daily news and videos

Install App

ವಾಸ್ತು ಪ್ರಕಾರ ದಕ್ಷಿಣಕ್ಕೆ ಮನೆ ಬಾಗಿಲು ಇರಬಾರದು ಯಾಕೆ?

Krishnaveni K
ಭಾನುವಾರ, 28 ಜನವರಿ 2024 (10:44 IST)
ಬೆಂಗಳೂರು: ಸಾಮಾನ್ಯವಾಗಿ ಮನೆ ಕಟ್ಟುವಾಗ ಅಥವಾ ಹೊಸ ಮನೆ ಖರೀದಿಸುವಾಗ ಇಲ್ಲವೇ ಬಾಡಿಗೆಗೆ ಪಡೆಯುವಾಗ ಯಾವ ದಿಕ್ಕಿಗೆ ಮನೆ ಬಾಗಿಲಿದೆ ಎಂದು ನೋಡುತ್ತೇವೆ.

ಪೂರ್ವ ಭಾಗಕ್ಕೆ ಮನೆಯ ಮುಂಬಾಗಿಲು ಇದ್ದರೆ ಉತ್ತಮ ಎನ್ನುತ್ತೇವೆ. ಆದರೆ ಮನೆಯ ಬಾಗಿಲು ದಕ್ಷಿಣಕ್ಕೆ ಮುಖ ಮಾಡಿದ್ದರೆ ಒಳ್ಳೆಯದಲ್ಲ ಎನ್ನಲಾಗುತ್ತದೆ. ಹಾಗಿದ್ದರೆ ದಕ್ಷಿಣಕ್ಕೆ ಮನೆಯ ಬಾಗಿಲು ಇರುವುದು ಯಾಕೆ ಒಳ್ಳೆಯದಲ್ಲ? ನೋಡೋಣ.

ವಾಸ್ತು ಪ್ರಕಾರ ದಕ್ಷಿಣಕ್ಕೆ ಮುಖ ಮಾಡಿ ಬಾಗಿಲು ಇದ್ದರೆ ಅದನ್ನು ದುರಾದೃಷ್ಟ ಎನ್ನಲಾಗುತ್ತದೆ. ಮನೆ ಯಾವ ದಿಕ್ಕಿಗೆ ಇದೆ ಎನ್ನುವುದು ಆ ಮನೆಯಲ್ಲಿ ವಾಸಿಸುವವರ ಯೋಗ ಕ್ಷೇಮವನ್ನು ನಿರ್ಧರಿಸುತ್ತದೆ. ಇದು ಕೇವಲ ನಂಬಿಕೆ ಮಾತ್ರವಲ್ಲದೆ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ.

ದಕ್ಷಿಣ ದಿಕ್ಕಿಗೆ ಸೂರ್ಯನ ಬೆಳಕು ಬೀರುವುದು ಕಡಿಮೆ. ಸೂರ್ಯ ನಮಗೆ ಚೈತನ್ಯ ತುಂಬುವವನು. ಹೀಗಾಗಿ ಅಂಧಕಾರ ಆರ್ಥಿಕ, ಆರೋಗ್ಯ ಸಮಸ್ಯೆ ತಂದೊಡ್ಡಬಹುದು ಎಂಬ ನಂಬಿಕೆಯಿದೆ. ನಾವು ವಾಸಿಸುವ ಮನೆಗೆ ಗಾಳಿ, ಬೆಳಕು ಕೂಡಾ ಅಷ್ಟೇ ಮುಖ್ಯ. ಇದು ವೈಜ್ಞಾನಿಕ ದೃಷ್ಟಿಯಿಂದಲೂ ಉಪಯುಕ್ತ.

ದಕ್ಷಿಣಾಭಿಮುಖವಾಗಿ ಮನೆಯಿದ್ದರೆ ಆರೋಗ್ಯ, ಆರ್ಥಿಕ ಸಮಸ್ಯೆಗಳು ಕಾಡಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ. ಪೂರ್ವ ಇಲ್ಲವೇ ಉತ್ತರಾಭಿಮುಖವಾಗಿದ್ದರೂ ಮನೆಯಿಂದ ನಮಗೆ ಸಮಸ್ಯೆಯಾಗದು ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Devi Mantra: ಮಂಗಳವಾರದಂದು ತಪ್ಪದೇ ಲಲಿತಾ ದೇವಿಯ ಈ ಸ್ತೋತ್ರ ಓದಿ

Mrthyunjaya mantra: ರೋಗ ಭಯ, ಅಕಾಲ ಮೃತ್ಯುಭಯ ನಾಶಕ್ಕೆ ಮೃತ್ಯುಂಜಯ ಅಷ್ಟೋತ್ತರ

ಜೀವನದಲ್ಲಿ ಸುಖ, ನೆಮ್ಮದಿಗಾಗಿ ಭಾನುವಾರ ಬೆಳಗ್ಗೆ ಈ ಪೂಜೆ ಮಾಡಿ

Shani Astotthara: ಶನಿ ಅಷ್ಟೋತ್ತರವನ್ನು ತಪ್ಪದೇ ಓದಿ

Lakshmi mantra: ಆದಿಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments