Select Your Language

Notifications

webdunia
webdunia
webdunia
webdunia

ಈ ದೇವಾಲಯಕ್ಕೆ ನೀರಿನ ಹರಕೆ ಕಟ್ಟಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ!

ಈ ದೇವಾಲಯಕ್ಕೆ ನೀರಿನ ಹರಕೆ ಕಟ್ಟಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ!
ಮಂಗಳೂರು , ಮಂಗಳವಾರ, 21 ಜುಲೈ 2020 (13:25 IST)
ಮಂಗಳೂರು: ಕೆಲವೊಂದು ದೇವಾಲಯಗಳಲ್ಲಿ ವಿಶಿಷ್ಟ ರೀತಿಯಲ್ಲಿ ಹರಕೆಗಳನ್ನು ತೀರಿಸಲಾಗುತ್ತದೆ. ಆದರೆ ಕುಂದಾಪುರದ ಗುಡ್ಡದಾಟು ವಿನಾಯಕ ದೇವಾಲಯದಲ್ಲಿ ನೀರಿನ ಹರಕೆ ಸಲ್ಲಿಸಿದರೆ ಸಾಕು!


ಇಲ್ಲಿ ಪ್ರತಿನ್ಯ ಗಣಪತಿ ದೇವರಿಗೆ 1000 ಕೊಡಗಳ ನೀರಿನ ಅಭಿಷೇಕ ಮಾಡಲಾಗುತ್ತದೆ. ಅದೂ ನೀರನ್ನು ದೇವಾಲಯದ ಆವರಣದೊಳಗಿನ ಬಾವಿಯಿಂದ ಸೇದಿ ಅಭಿಷೇಕ ಮಾಡಲಾಗುತ್ತದೆ. ಈ ವಿಶಿಷ್ಟ ಹರಕೆ ತೀರಿಸಲು ಭಕ್ತಾದಿಗಳು ಮೊದಲೇ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಈ ರೀತಿ ಗಣಪತಿಗೆ ಅಭಿಷೇಕ ಮಾಡಿದ ನೀರನ್ನು ಮರುದಿನ ನೈವೇದ್ಯಕ್ಕೆ ಬಳಸಲಾಗುತ್ತದೆ. ಈ ರೀತಿ ಮಾಡುವುದರಿಂದ ಗಣಪತಿ ಇಷ್ಟಾರ್ಥ ಪೂರೈಸುತ್ತಾನೆ ಎಂಬುದು ಇಲ್ಲಿನವರ ನಂಬಿಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 15ರಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ?