Publish Date: Tue, 28 May 2019 (08:50 IST)
Updated Date: Tue, 28 May 2019 (08:52 IST)
ಬೆಂಗಳೂರು : ಲೈಂಗಿಕ ಸಂಬಂಧ ದಾಂಪತ್ಯ ಜೀವನವನ್ನು ಗಟ್ಟಿಯಾಗಿಸುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಸಮಯದಲ್ಲಿ ಸಂಬಂಧ ಬೆಳೆಸಬಾರದಂತೆ. ಇದರಿಂದ ಜೀವನ ಸುಖಕರವಾಗುವ ಬದಲು ದರಿದ್ರ ಬೆನ್ನು ಹತ್ತುತ್ತದೆಯಂತೆ.ಅದು ಯಾವ ಸಮಯ ಎಂಬುದನ್ನು ಗ್ರಂಥದಲ್ಲಿ ತಿಳಿಸಲಾಗಿದೆ.
ಯಾವುದೇ ನದಿ ದಂಡೆ ಮೇಲೆ ಅಥವಾ ನದಿ ಬಳಿ ಶಾರೀರಿಕ ಸಂಬಂಧ ಬೆಳೆಸಬಾರದು. ನೀರಿನ ಝುಳು ಝುಳು ಶಬ್ಧವನ್ನು ದಂಪತಿ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕೇಳಬಾರದು ಎಂದು ಗ್ರಂಥದಲ್ಲಿ ಹೇಳಲಾಗಿದೆ. ಧಾರ್ಮಿಕ ಕಾರ್ಯಕ್ಕಾಗಿ ಹಾಕಿದ ಅಗ್ನಿ ಮುಂದೆ ಶಾರೀರಿಕ ಸಂಬಂಧ ಬೆಳೆಸಬಾರದು. ಸ್ಮಶಾನದಲ್ಲಿ ಅಥವಾ ಶವದ ಆಸುಪಾಸು ಸಂಬಂಧ ಬೆಳೆಸಬಾರದು. ಮಕ್ಕಳು ಅಥವಾ ಶಿಶುಗಳ ಎದುರಲ್ಲಿ ಸಂಬಂಧ ಬೆಳೆಸುವುದು ಘೋರ ಪಾಪ ಎನ್ನಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಆಸುಪಾಸು ಅಥವಾ ಸಾವಿಗೆ ಹತ್ತಿರವಾಗುತ್ತಿರುವ ವ್ಯಕ್ತಿ ಆಸುಪಾಸು ಸಂಬಂಧ ಬೆಳೆಸುವುದು ಶುಭವಲ್ಲ. ಸಂಬಂಧಿಕರು ಅಥವಾ ಸ್ನೇಹಿತರ ಮನೆಯಲ್ಲಿ ಶಾರೀರಿಕ ಸಂಬಂಧ ಬೆಳೆಸುವುದು ಕೂಡ ಶಾಸ್ತ್ರದ ಪ್ರಕಾರ ನಿಷಿದ್ಧ. ಪೂಜಾರಿ, ಸಂತ, ಸನ್ಯಾಸಿ, ಧಾರ್ಮಿಕ ಕಾರ್ಯಗಳನ್ನು ಮಾಡುವ ವ್ಯಕ್ತಿ ಹತ್ತಿರವಿರುವಾಗ ಸಂಬಂಧ ಬೆಳೆಸುವುದು ಸೂಕ್ತವಲ್ಲ.