Publish Date: Thu, 10 Jan 2019 (09:23 IST)
Updated Date: Thu, 10 Jan 2019 (09:24 IST)
ಬೆಂಗಳೂರು: ಶನಿ ದೆಸೆಯಿಂದಾಗಿ ಎಲ್ಲವೂ ಕೆಡುಕಾಗುತ್ತಿದೆ, ಕಷ್ಟ ಕಾಲ ಬೆನ್ನ ಹಿಂದೆಯೇ ಇದೆ ಎಂಬ ಚಿಂತೆಯೇ? ಹಾಗಿದ್ದರೆ ಪ್ರತೀ ಶನಿವಾರಗಳಂದು ಈ ಕೆಲಸ ಮಾಡಿ.
ಹನುಮಂತನ ಪೂಜೆ ಮಾಡಿದರೆ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುವುದು ಎಂಬ ನಂಬಿಕೆಯಿದೆ. ಅದೇ ರೀತಿ ಪುರಾಣಗಳ ಪ್ರಕಾರ ಶನಿ ಶಿವ ಭಕ್ತ. ಹೀಗಾಗಿ ಶಿವನ ಆರಾಧನೆ ಮಾಡುವುದೂ ಸೂಕ್ತ.
ಪ್ರತೀ ಶನಿವಾರ ನವಗ್ರಹ ಪೀಡಹರ ಸ್ತೋತ್ರ ಓದುವುದರಿಂದ ಶನಿಯ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ನವಗ್ರಹ ಪೂಜೆ ಮಾಡಿ ಕಪ್ಪು ಎಳ್ಳು ದಾನ, ಕಪ್ಪು ವಸ್ತ್ರ ದಾನ ಮಾಡುವುದು ಮತ್ತು ಕಾಗೆಗಳಿಗೆ ಅಕ್ಕಿ ಕಾಳು ನೀಡುವುದರಿಂದ ಶನಿ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ