Publish Date: Sat, 26 Jan 2019 (08:59 IST)
Updated Date: Sat, 26 Jan 2019 (09:00 IST)
ಬೆಂಗಳೂರು: ನಾವು ಹಿಂದೆ ಮಾಡಿದ ಪಾಪದ ಫಲಗಳನ್ನು ಆ ಭಗವಂತ ಲೆಕ್ಕ ಇಟ್ಟುಕೊಂಡು, ಅದಕ್ಕೆ ಕಾಲ ಕಾಲಕ್ಕೆ ತಕ್ಕ ಫಲ ಅನುಭವಿಸುವಂತೆ ಮಾಡುತ್ತಾನೆ ಎಂಬ ನಂಬಿಕೆ ನಮ್ಮದು.
ಹಾಗೆಯೇ ಕೆಲವರು ನಮ್ಮ ಮಕ್ಕಳೇ ನಮ್ಮನ್ನು ಹಿಂಸೆ ಮಾಡುತ್ತಾರೆ, ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡುತ್ತಾರೆ ಎಂದು ಗೋಳಾಡುವುದು ನೋಡಿರುತ್ತೇವೆ. ಇದಕ್ಕೂ ಆ ಪೋಷಕರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವೇ ಕಾರಣವಾಗಿರುತ್ತದೆ.
ಹಿಂದಿನ ಜನ್ಮದಲ್ಲಿ ನಾವು ಯಾರೊಂದಿಗಾದರೂ ಶತೃತ್ವ ಕಟ್ಟಿಕೊಂಡಿದ್ದರೆ ಅಥವಾ ಕೆಡುಕು ಮಾಡಿದ್ದರೆ, ಅವರು ನಮ್ಮ ಮಕ್ಕಳ ರೂಪದಲ್ಲಿ ನಮಗೆ ಶತ್ರುಗಳಾಗಿ ಹುಟ್ಟುತ್ತಾರೆ. ಅಂತಹ ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಗಳೊಂದಿಗೆ ಜಗಳವಾಡುತ್ತಾರೆ. ಜೀವನ ಪೂರ್ತಿ ಯಾವುದೋ ವಿಚಾರಕ್ಕೆ ಪೀಡಿಸುತ್ತಾರೆ. ತಂದೆ-ತಾಯಿಗೆ ನಾನಾ ರೀತಿಯಲ್ಲಿ ಹಿಂಸೆ ಕೊಟ್ಟು ಒಳಗೊಳಗೇ ಆನಂದ ಪಡುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ