Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 15 ಸೆಪ್ಟಂಬರ್ 2019 (08:34 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಣಕಾಸಿನ ವಿಚಾರದಲ್ಲಿ ಹಲವು ಲಾಭದಾಯಕ ದಾರಿಗಳು ಸಿಗಲಿವೆ. ಆದರೆ ವಿಪರೀತ ಖರ್ಚಿಗೆ ಕಡಿವಾಣ ಹಾಕುವುದು ಅಗತ್ಯ. ಪ್ರೀತಿ ಪಾತ್ರರೊಂದಿಗೆ ಪ್ರವಾಸ, ಸಂಚಾರ ಸಾಧ‍್ಯತೆಯಿದೆ. ಹಿತಶತ್ರುಗಳಿಂದ ವಂಚನೆಗೊಳಗಾಗದಂತೆ ಎಚ್ಚರವಹಿಸಿ.

ವೃಷಭ: ದೈವಾನುಗ್ರಹದಿಂದ ಇಂದು ಎಲ್ಲವೂ ನಿಮಗೆ ಅನುಕೂಲಕರವಾಗಿ ನಡೆಯಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ವಹಿಸಬೇಕು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಅಂದುಕೊಂಡ ಕಾರ್ಯಗಳನ್ನು ಸುಗಮವಾಗಿ ನೆರವೇರಿಸುವಿರಿ.

ಮಿಥುನ: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ಸಿಗುವುದು. ಸಹನೆ ಪರೀಕ್ಷಿಸುವಂತಹ ಪ್ರಸಂಗಗಳು ಎದುರಾಗಬಹುದು. ತಾಳ್ಮೆಯಿಂದಿರಬೇಕು. ಅವಿವಾಹಿತರಿಗೆ ವಿವಾಹ ಭಾಗ್ಯ ಸದ್ಯದಲ್ಲೇ ಕೂಡಿಬರುವುದು. ಐಶ್ವರ್ಯ ಪ್ರಾಪ್ತಿಯಾದರೂ ಅದನ್ನು ಜತನದಿಂದ ಕೂಡಿಡುವುದು ಮುಖ್ಯ.

ಕರ್ಕಟಕ: ತಾಳ್ಮೆ ಸಮಾಧಾನದಿಂದ ಮುನ್ನಡೆದರೆ ನೀವುಂ ಅಂದುಕೊಂಡ ಕಾರ್ಯಗಳನ್ನು ಸುಗಮವಾಗಿ ನೆರವೇರಿಸಬಹುದು. ನಿಮ್ಮ ಮನಸ್ಸಿಗೆ ಹಿಡಿಸಿದ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ಬೆಳ್ಳಂ ಬೆಳಿಗ್ಗೆಯೇ ಕೆಲವೊಂದು ಅಶುಭ ಸೂಚಕ ಘಟನೆಗಳು ನಡೆದು ಮನಸ್ಸಿಗೆ ಬೇಸರವಾಗಬಹುದು. ಸಾಂಸಾರಿಕವಾಗಿ ಸಂಗಾತಿಯಿಂದ ಸಮಯೋಚಿತ ಸಲಹೆ ಸಿಗುವುದು. ಕುಲದೇವರ ಆರಾಧನೆ ಮಾಡಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಕನ್ಯಾ: ಪ್ರಯತ್ನ ಬಲದಿಂದಲೇ ನೀವು ಅಂದುಕೊಂಡ ಕಾರ್ಯಗಳಲ್ಲಿ ಜಯ ಗಳಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ ತೋರಿಬರುವುದು. ನಿರುದ್ಯೋಗಿಗಳಿಗೆ ಅಚ್ಚರಿಯ ವಾರ್ತೆ ಕಾದಿದೆ. ದೂರ ಸಂಚಾರ ಮಾಡಬೇಕಾಗುತ್ತದೆ. ಪ್ರಯಾಣದಲ್ಲಿ ಎಚ್ಚರ.

ತುಲಾ: ಸಾಂಸಾರಿಕವಾಗಿ ಶಾಂತಿ ಸಮಾಧಾನ ನೆಲೆಸಿರುತ್ತದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಸಣ್ಣ ಮಟ್ಟಿಗಿನ ಲಾಭ ಕಂಡುಬರಲಿದೆ.

ವೃಶ್ಚಿಕ: ಆರೋಗ್ಯ ಸಮಸ್ಯೆಗೆ ಉಪೇಕ್ಷೆ ಮಾಡದೇ ವೈದ್ಯರ ಸಲಹೆ ಪಡೆಯಿರಿ. ಉದ್ಯೋಗ ಕ್ಷೇತ್ರದಲ್ಲಿ ನಿಧಾನವಾಗಿ ಮೇಲಧಿಕಾರಿಗಳ ಹಿಡಿತ ತಪ್ಪಿ ನೆಮ್ಮದಿಯ ನಿಟ್ಟುಸಿರುವ ಬಿಡುವಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಧನು: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಸಿಗಲಿದೆ.  ಅನಿರೀಕ್ಷಿತವಾಗಿ ಪ್ರೀತಿ ಪಾತ್ರರ ಆಗಮನದಿಂದ ಮನೆಯಲ್ಲಿ ಸಂತಸವಿರುವುದು. ದೂರ ಸಂಚಾರಕ್ಕೆ ಸಿದ್ಧತೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಕಠಿಣ  ಅಭ್ಯಾಸ ಮಾಡಬೇಕಾಗುತ್ತದೆ.

ಮಕರ: ಮಾನಸಿಕವಾಗಿ ಅಸ್ಥಿರತೆ ಕಾಡುವುದು. ಇದರಿಂದ ನಿರ್ಧಾರ ಕೈಗೊಳ್ಳುವಲ್ಲಿ ಸೋಲಾಗಬಹುದು. ನಿಮ್ಮ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊರಹಾಕಬೇಕಾದ ಸಮಯವಿದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯಿರಲಿದೆ. ಸಂಗಾತಿಯ ಪ್ರೀತಿ ಸಿಗುವುದು.

ಕುಂಭ: ಚರ್ಮಸಂಬಂಧೀ ಆರೋಗ್ಯ ಸಮಸ್ಯೆ ಚಿಂತೆಗೀಡು ಮಾಡುವುದು. ಪ್ರೇಮಿಗಳ ಗುಟ್ಟು ಮನೆಯವರ ಎದುರು ಬಹಿರಂಗವಾಗಲಿದೆ. ಸಂತಾನಾಪೇಕ್ಷಿತ ದಂಪತಿ ದೇವರ ಮೊರೆ ಹೋಗುವರು. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆಯಿದೆ.

ಮೀನ: ಸರಕಾರಿ ಉದ್ಯೋಗಿಗಳಿಗೆ ಬಿಡುವಿಲ್ಲದ ಕಾರ್ಯದೊತ್ತಡವಿರುವುದು. ಉದ್ಯೋಗ ಕ್ಷೇತ್ರದ ವಾತಾವರಣದಿಂದ ಮನಸ್ಸು, ದೇಹ ಹೈರಾಣಾಗುವುದು. ಸಾಮಾಜಿಕ ರಂಗದಲ್ಲಿ ಸೂಕ್ತ ಸ್ಥಾನ ಮಾನ ಲಭ್ಯವಾಗಲಿದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯೋಗ ಸಿಗಲು ತಪ್ಪದೇ ಮಾಡಿ ಈ ಕೆಲಸ