Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 13 ಸೆಪ್ಟಂಬರ್ 2019 (08:50 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೆಲಸ ಕಾರ್ಯಗಳಿಗಾಗಿ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ದೃಢ ನಿರ್ಧಾರದಿಂದ ಮುನ್ನಡೆಯಬೇಕಾದ ದಿನವಿದು. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಮುನ್ನಡೆ.

ವೃಷಭ: ಸಾಂಸಾರಿಕವಾಗಿ ತಾಳ್ಮೆ ಕಳೆದುಕೊಳ್ಳುವಂತಹ ಪ್ರಸಂಗ ಎದುರಾಗಬಹುದು. ದುಡುಕಿನ ಮಾತನಾಡಬೇಡಿ. ಆರ್ಥಿಕವಾಗಿ ಹಣಕಾಸಿನ ಸಮಸ್ಯೆ ಬರದು. ಆದರೆ ಮಿತ್ರರ ಅಸಮಾಧಾನಕ್ಕೆ ಗುರಿಯಾಗಬೇಕಾಗುತ್ತದೆ. ಮಾನಸಿಕವಾಗಿ ತಾಳ್ಮೆ ಮುಖ್ಯ.

ಮಿಥುನ: ಸಾಂಸಾರಿಕವಾಗಿ ಹೆಚ್ಚಿನ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಮುಖ್ಯ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಅನಿರೀಕ್ಷಿತ ರೀತಿಯಲ್ಲಿ ಧನಾಗಮನವಾಗಲಿದೆ. ಮಿತ್ರರ ಸಹಕಾರ ದೊರೆಯುವುದು. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಕರ್ಕಟಕ: ವೃತ್ತಿರಂಗದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಮೇಲಧಿಕಾರಿಗಳ ಪ್ರಶಂಸೆಗೊಳಗಾಗುವಿರಿ. ವ್ಯಾಪಾರದಲ್ಲಿ ಲಾಭ, ವ್ಯವಹಾರದಲ್ಲಿ ಹೊಸ ಶತ್ರುಗಳು ಸೃಷ್ಟಿಯಾಗುವರು. ಹಿತಶತ್ರುಗಳ ಬಗ್ಗೆ ಎಚ್ಚರವಾಗಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ಸಿಂಹ: ಅನಗತ್ಯವಾಗಿ ತೊಂದರೆಗೆ ಸಿಲುಕಿಕೊಳ್ಳುವಿರಿ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ. ಮನೆಯಲ್ಲಿ ಶುಭಮಂಗಲ ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ಕೌಟುಂಬಿಕವಾಗಿ ಸಂತಸದ ದಿನಗಳಿವು. ಹೊಸ ಮಿತ್ರರ ಭೇಟಿಯಾಗುವಿರಿ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ಆರ್ಥಿಕವಾಗಿ ಹಣಕಾಸಿಗೆ ಸಮಸ್ಯೆಯಾಗದು. ದಿನದಂತ್ಯಕ್ಕೆ ಮತ್ತಷ್ಟು ಶುಭ ಫಲ.

ತುಲಾ: ಆರ್ಥಿಕವಾಗಿ  ಅಧಿಕ ಧನವ್ಯಯವಾದೀತು. ಹಾಗಿದ್ದರೂ ಕಾರ್ಯಸಾಧನೆಯಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಬಂದು ಸಂತಸವಾಗುವುದು. ವೃತ್ತಿರಂಗದಲ್ಲಿ ಅನಿರೀಕ್ಷಿತ ಬಡ್ತಿ, ಮುನ್ನಡೆ ಯೋಗವಿದೆ.

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರಾಗಲಿದೆ. ಕಾಳಜಿವಹಿಸಬೇಕು. ಉದ್ಯೋಗಿಗಳಿಗೆ ಸಮಾಧಾನಕರ ದಿನ. ಬಿಡುವಿಲ್ಲದೇ ದುಡಿಯಬೇಕಾದರೂ ತಕ್ಕ ಫಲಿತಾಂಶ ಸಿಗುವುದರಿಂದ ಸಂತಸವಾಗುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

ಧನು: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಯೋಗವಿದೆ. ಇಷ್ಟು ದಿನ ದೂರವಾಗಿದ್ದ ಸಂಬಂಧಗಳು ಮರಳಿ ಬೆಸೆಯಲಿವೆ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಸಂಗಾತಿಯೊಂದಿಗೆ ಅಸಮಾಧಾನವಾಗಲಿದೆ.

ಮಕರ: ಅಂದುಕೊಂಡ ಕಾರ್ಯಗಳು ನೆರವೇರಿ ಮುನ್ನಡೆ ಅನುಭವಕ್ಕೆ ಬರುವುದು. ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ ಕಂಡುಬರುವುದು. ಸಂಗಾತಿಯೊಡನೆ ಇಷ್ಟು ದಿನ ಮುಚ್ಚಿಟ್ಟ ವಿಚಾರ ಬಹಿರಂಗವಾಗಲಿದೆ. ವ್ಯವಹಾರದಲ್ಲಿ ಎಚ್ಚರವಿರಲಿ.

ಕುಂಭ: ದೈನಂದಿನ ಕೆಲಸಗಳಲ್ಲಿ ಬೇಸರ ಮೂಡುವುದು. ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುವಿರಿ. ಅನಗತ್ಯ ವಿವಾದಗಳಿಂದ ದೂರವಿರುವುದೇ ಉತ್ತಮ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ವೃತ್ತಿರಂಗದಲ್ಲಿ ಮುನ್ನಡೆಯಿದೆ.

ಮೀನ: ಆರ್ಥಿಕವಾಗಿ ಗಮನಾರ್ಹ  ಅಭಿವೃದ್ಧಿ ಕಂಡುಬಂದು ಅಂದುಕೊಂಡ ಕೆಲಸಗಳಿಗೆ ಚಾಲನೆ ನೀಡುವಿರಿ. ಕಷ್ಟಗಳು ಕರಗಲಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ. ಸಂಸಾರದಲ್ಲಿ ಭಿನ್ನಮತ ಶಮನವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಸ್ತುದೋಷ ನಿವಾರಣೆಗೆ ದೇವರ ಮನೆಯಲ್ಲಿ ತಪ್ಪದೇ ಇಡಿ ಈ ವಸ್ತು