Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 10 ಮಾರ್ಚ್ 2019 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮನೆಯಲ್ಲಿ ಅಶಾಂತಿಯ ವಾತಾವರಣವಿರುವುದು. ಹೀಗಾಗಿ ನೆಮ್ಮದಿಗಾಗಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಮಕ್ಕಳ ಆರೋಗ್ಯ ಕೈಕೊಡುವುದು. ಅದರ ಹೊರತಾಗಿ ಬಂಧುಮಿತ್ರರಿಂದ ಶುಭ ಸುದ್ದಿಯಿದೆ.

ವೃಷಭ: ಕಷ್ಟ ಕಾಲದಲ್ಲಿ ನಿಮಗೆ ನೆರವಾದವರಿಗೆ ಪ್ರತ್ಯುಪಕಾರ ಮಾಡಲು ಇದೇ ಸಕಾಲ. ಅರ್ಧಕ್ಕೆ ನಿಂತ ಕೆಲಸಗಳನ್ನು ಪುನರಾರಂಭಿಸಿ. ಮನೆ ಬದಲಾವಣೆಗೆ ಚಿಂತನೆ ಮಾಡುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ: ನೀರಿಗಾಗಿ ಪರಿತಪಿಸಬೇಕಾದೀತು. ಪೂರ್ವ ದಿಕ್ಕಿನ ಪ್ರಯಾಣ ನಿಮಗೆ ಶುಭವುಂಟುಮಾಡಲಿದೆ. ಹಿರಿಯರ ಮನಸ್ಸಿಗೆ ನೋವಾಗುವಂತಹ ಘಟನೆಗಳು ನಡೆಯುವುದು. ಆರ್ಥಿಕವಾಗಿ ಸಮಾಧಾನಕರ ವಾತಾವರಣವಿರುವುದು.

ಕರ್ಕಟಕ: ಮಾತಿನ ಮೇಲೆ ನಿಗಾ ಇಟ್ಟು, ಶಾಂತಿಯಿಂದಿರುವುದೇ ಲೇಸು. ಸಂಗಾತಿಯ ಮಾತಿಗೆ ಕಿವಿಗೊಡಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ಕಂಡುಬರುವುದು.  ದೇವತಾ ಪ್ರಾರ್ಥನೆ ಮಾಡಿ. ಒಳಿತಾಗುತ್ತದೆ.

ಸಿಂಹ: ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಆರಂಭದಲ್ಲಿದ್ದ ಉತ್ಸಾಹ ಮತ್ತೆ ತೋರದು. ವಿಷ್ಣು ಸಹಸ್ರ ನಾಮ ಪಠಿಸಿ, ಇದರಿಂದ ಮನಸ್ಸಿಗೂ ಧೈರ್ಯ, ಆತ್ಮವಿಶ್ವಾಸ ಮೂಡುತ್ತದೆ. ಅವಿವಾಹಿತರಿಗೆ ಹೊಸ ವಿವಾಹ ಪ್ರಸ್ತಾಪಗಳು ಬರುವುದು.

ಕನ್ಯಾ: ಕಲಾಕ್ಷೇತ್ರದಲ್ಲಿರುವವರಿಗೆ ಇಂದು ಶುಭ ಫಲ ಕಾಣಬಹುದು. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ಎದುರಾಗುವುದು. ಬಂಧು ಮಿತ್ರರು ಅಚ್ಚರಿಯ ವಾರ್ತೆಯೊಂದಿಗೆ ಅನಿರೀಕ್ಷಿತವಾಗಿ ಆಗಮಿಸುವರು.

ತುಲಾ: ಹಿರಿಯರ ಮನಸ್ಸಿಗೆ ನೋವುಂಟುಮಾಡುವ ಕೆಲಸ ಮಾಡಬೇಡಿ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳೊಂದಿಗೆ ಕಲಹವಾಗಬಹುದು. ಎಚ್ಚರಿಕೆಯಿಂದಿರಿ. ದುಡುಕು ವರ್ತನೆ ಬೇಡ.

ವೃಶ್ಚಿಕ: ಹೊಸ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಸಕಾಲ. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ. ಬಂಧು ಮಿತ್ರರೊಡನೆ ಪ್ರವಾಸ ತೆರಳುವಿರಿ. ನೂತನ ದಂಪತಿಗಳಿಗೆ ಸಂತಾನ ಫಲದ ಸೂಚನೆ ದೊರೆಯಲಿದೆ.

ಧನು: ಹಿರಿಯರಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಸಾಲಗಾರರು ನಿಮ್ಮ ಮನೆ ಬಾಗಿಲಿಗೆ ಬರುವರು. ಆರ್ಥಿಕ ಗಳಿಕೆಯ ಮಾರ್ಗದ ಬಗ್ಗೆ ಯೋಚನೆ ಮಾಡಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ಮಕರ: ಎಲ್ಲವೂ ನೀವು ನೆನೆಸಿಕೊಂಡಂತೇ ನಡೆಯಲಿದೆ. ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಕ್ಕಿ, ಗೌರವಕ್ಕೆ ಪಾತ್ರರಾಗುವಿರಿ. ಆದರೆ ಸಂಗಾತಿಯೊಡನೆ ಮನಸ್ತಾಪ ಸಾಧ್ಯತೆಯಿದೆ. ಎಚ್ಚರಿಕೆ ಅಗತ್ಯ.

ಕುಂಭ: ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚಗಳಾಗಲಿವೆ. ಮಕ್ಕಳು ನಿಮ್ಮ ಬಗ್ಗೆ ಬೇಸರಗೊಳ್ಳುವರು. ಶೀತ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಾಡಲಿವೆ. ದೇವತಾ ಪ್ರಾರ್ಥನೆ ಮಾಡಿದರೆ ಎಲ್ಲವೂ ಶುಭವಾಗುವುದು.

ಮೀನ: ಯಾವುದೋ ಭಾವನಾತ್ಮಕ ವಿಚಾರ ನಿಮ್ಮ ಮನಸ್ಸಿಗೆ ಘಾಸಿ ಮಾಡಲಿದೆ. ಹೃದಯಕ್ಕೆ ಹತ್ತಿರವಾದವರ ಮಾತಿಗೆ ಬೆಲೆ ಕೊಡಿ. ನಿರುದ್ಯೋಗಿಗಳು ತಾತ್ಕಾಲಿಕವಾಗಿ ಉದ್ಯೋಗ ಕಂಡುಕೊಳ್ಳುವರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments