Webdunia - Bharat's app for daily news and videos

Install App

ಈ ಸಮಯದಲ್ಲಿ ಹಣ ಹೂಡಿಕೆ ಮಾಡಿದರೆ ಧನನಷ್ಟವಾಗುವುದು ಖಂಡಿತ

Webdunia
ಭಾನುವಾರ, 10 ಮಾರ್ಚ್ 2019 (06:56 IST)
ಬೆಂಗಳೂರು : ಪ್ರತಿಯೊಬ್ಬರು ತಮ್ಮ ಮುಂದಿನ ಜೀವನಕ್ಕಾಗಿ ಹಣವನ್ನು ಉಳಿತಾಯ ಮಾಡುತ್ತಾರೆ. ಬ್ಯಾಂಕ್ ಖಾತೆಗೆ ಹಣ ಹಾಕಿಡುತ್ತಾರೆ, ಜೀವ ವಿಮೆ ಮಾಡುತ್ತಾರೆ, ಬಡ್ಡಿಗಾಗಿ ಸಾಲ ನೀಡುತ್ತಾರೆ, ಹೀಗೆ ಅನೇಕ ರೀತಿಯಲ್ಲಿ ಹಣವನ್ನು ಉಳಿತಾಯ ಮಾಡುತ್ತಾರೆ.


ಈ ರೀತಿ ಹೂಡಿಕೆ ಮಾಡಿದ ಹಣ ವೃದ್ಧಿಯಾಗಲು ಒಳ್ಳೇಯ ಸಮಯ, ದಿವಸ ನೋಡಿದರೆ ಉತ್ತಮ. ಕೆಲವೊಂದು ವಾರ, ತಿಥಿ, ಮಾಸದಲ್ಲಿ ಹನ ಹೂಡಿಕೆ ಮಾಡುವುದು ಒಳ್ಳೆಯದಲ್ಲ. ಆದ್ದರಿಂದ ಯಾವ ದಿನ, ಸಮಯದಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಿ.


ಕೃಷ್ಣಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, ದಶಮಿ, ಏಕಾದಶಿ, ದ್ವಾದಶಿ ಹಾಗೆ ಶುಕ್ಲ ಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, ತ್ರಿಯೋದಶಿ ತಿಥಿಯ ಜೊತೆಗೆ ಸೋಮವಾರ, ಭಾನುವಾರ, ಶನಿವಾರದ ಜೊತೆಗೆ ಅಶ್ವಿನಿ, ಪುನರ್ವಸು, ಪುಷ್ಯ, ಚಿತ್ರಾ, ಅನುರಾಧಾ, ಶ್ರವಣ, ಧನಿಷ್ಠ, ರೇವತಿ ಈ ಯಾವುದಾದ್ರೂ ಒಂದು ನಕ್ಷತ್ರದಲ್ಲಿ ಜಮಾ ಮಾಡಿದ ಹಣದಿಂದ ಧನವೃದ್ಧಿಯಾಗುತ್ತದೆ.


ಬಡ್ಡಿಗಾಗಿ ಸಾಲ ನೀಡುವ ವೇಳೆ ಕೂಡ ಸಮಯ ನೋಡುವುದು ಒಳ್ಳೆಯದು. ಕೃಷ್ಣಪಕ್ಷದ ತೃತೀಯ, ಷಷ್ಠಿ, ಸಪ್ತಮಿ, ಅಷ್ಠಮಿ, ದಶಮಿ, ಏಕಾದಶಿ, ದ್ವಾದಶಿ ಹಾಗೂ ಶುಕ್ಲಪಕ್ಷದ ತೃಯೋದಶಿಯಂದು ಸಾಲ ನೀಡಬೇಕು. ಈ ತಿಥಿಗಳು ಅಶ್ವಿನಿ, ಪುನರ್ವಸು, ಚಿತ್ರಾ, ಅನುರಾಧಾ, ಮೃಗಶಿರ, ಪುಷ್ಯ, ಶ್ರವಣ, ಧನಿಷ್ಠ, ಶತಬಿಶಾ ಹಾಗೂ ರೇವತಿ ಇವುಗಳಲ್ಲಿ ಯಾವುದಾದ್ರೂ ಒಂದು ನಕ್ಷತ್ರದಲ್ಲಿ ಬಂದ್ರೆ ಬಹಳ ಒಳ್ಳೆಯದು. ಶನಿವಾರ, ಶುಕ್ರವಾರ ಹಾಗೂ ಸೋಮವಾರ ಒಳ್ಳೆಯ ವಾರ.


ಹಣದ ವ್ಯವಹಾರ,ಠೇವಣಿ ಸಂಗ್ರಹ ಇತ್ಯಾದಿಗಳಿಗೆ ಮಂಗಳವಾರ, ಸಂಕ್ರಾಂತಿಯ ದಿನ, ಸಂಕ್ರಾಂತಿ ಜೊತೆ ಭಾನುವಾರ ಬಂದಲ್ಲಿ, ಜೊತೆಗೆ ಮೂಲಾ ನಕ್ಷತ್ರ, ಜೇಷ್ಠ, ವೈಶಾಖ, ಕೃತಿಕಾ ಸೇರಿದಂತೆ ಕೆಲ ನಕ್ಷತ್ರಗಳಲ್ಲಿ ಮಾಡಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments