Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಬುಧವಾರ, 2 ಜನವರಿ 2019 (09:04 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ಸ್ಥಾನಮಾನ ದೊರಕಲಿದೆ. ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ವೃಷಭ: ಅನಿರೀಕ್ಷಿತ ಖರ್ಚು ವೆಚ್ಚಗಳಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾಗುವಿರಿ. ಹೊಸ ವ್ಯವಹರಾದಲ್ಲಿ ಇಂದು ತೊಡಗಿಸಿಕೊಳ್ಳದೇ ಇದ್ದರೆ ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ.

ಮಿಥುನ: ಕುಟುಂಬದ ಕಾರ್ಯ ಕೆಲಸಗಳಿಗೆ ಓಡಾಟ, ಖರ್ಚು ವೆಚ್ಚ ಮಾಡಬೇಕಾಗುತ್ತದೆ. ವೃತ್ತಿಯಲ್ಲಿ ನೀವು ಮಾಡಿದ ಕೆಲಸಗಳಿಗೆ ಪ್ರಶಂಸೆ ವ್ಯಕ್ತವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವುದು.

ಕರ್ಕಟಕ: ಕೈ ಹಿಡಿದ ಕಾರ್ಯಗಳು ಅಂದುಕೊಂಡಂತೇ ನಡೆಯದೇ ಮನಸ್ಸಿಗೆ ಬೇಸರ ಉಂಟಾಗುವುದು. ಅವಿವಾಹಿತರಿಗೆ ಹೊಸ ಸಂಬಂಧಗಳ ಪ್ರಸ್ತಾಪಗಳು ಬರುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಸಿಂಹ: ದೇವತಾ ಕಾರ್ಯಗಳನ್ನು ನೆರವೇರಿಸುವಿರಿ. ಶುಭ ಕಾರ್ಯಗಳಿಗಾಗಿ ಬಂಧುಗಳ ಮನೆಗೆ ಹೋಗುವಿರಿ. ದೂರ ಸಂಚಾರದ ಯೋಗವಿದ್ದು, ಆರೋಗ್ಯದಲ್ಲಿ ಕಾಳಜಿ ಅಗತ್ಯ.

ಕನ್ಯಾ: ವೃತ್ತಿರಂಗದಲ್ಲಿ ಅಪವಾದದ ಭೀತಿ ಎದುರಿಸಬೇಕಾದೀತು. ವೃತ್ತಿಯಲ್ಲಿ ಕಿರಿ ಕಿರಿ ಇದ್ದರೂ ಮನೆಯಲ್ಲಿ ಮಡದಿ, ಮಕ್ಕಳಿಂದ ಸಮಾಧಾನ ಸಿಗಲಿದೆ. ಹಿರಿಯರ ಬಗ್ಗೆ ಕಾಳಜಿ ವಹಿಸಬೇಕಾದ ಸಂದರ್ಭ ಎದುರಾದೀತು.

ತುಲಾ: ಆರ್ಥಿಕ ಲಾಭವಾಗಿ ಸಂತಸ ನೆಲೆ ನಿಲ್ಲಲಿದೆ. ಬಂಧು ಮಿತ್ರರ ಸಹಕಾರದಿಂದ ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ನೆರವೇರುವುದು. ತೀರ್ಥ ಯಾತ್ರೆ ಕೈಗೊಳ್ಳುವಿರಿ.

ವೃಶ್ಚಿಕ: ಹಿತಶತ್ರುಗಳ ಕಾಟ ಮನಸ್ಸಿಗೆ ಕಿರಿ ಕಿರಿ ಉಂಟು ಮಾಡುತ್ತದೆ. ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿ ಆಸ್ಪತ್ರೆಗೆ ಭೇಟಿ ನೀಡಬೇಕಾಗುವುದು. ಧರ್ಮ ಕಾರ್ಯಗಳನ್ನು ನೆರವೇರಿಸುವಿರಿ.

ಧನು: ವ್ಯಾಪಾರ, ವ್ಯವಹಾರಗಳಲ್ಲಿ ಒಳ್ಳೆಯ ಲಾಭ ಗಳಿಸುವಿರಿ. ವಿದ್ಯಾರ್ಥಿಗಳಿಗೆ ತಾವು ಮಾಡಿದ ಕೆಲಸಗಳಿಗೆ ಮನ್ನಣೆ ಸಿಕ್ಕಿ ಸಂತಸ ಮೂಡುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ.

ಮಕರ: ನಿಮ್ಮನ್ನು ಮಟ್ಟ ಹಾಕಲು ಬರುವ ಶತ್ರುಗಳಿಗೆ ಹಿನ್ನಡೆಯಾದೀತು. ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಧನಾಗಮನವಾಗಿ ಲಾಭ ಪಡೆಯುವಿರಿ. ದೂರ ಸಂಚಾರ ಯೋಗವೂ ಇದೆ.

ಕುಂಭ: ಪ್ರವಾಸ ಕೈಗೊಂಡು ಮಾನಸಿಕವಾಗಿ ಸಂತಸದ ವಾತಾವರಣದಲ್ಲಿರುವಿರಿ. ಧನಾಗಮನವಾದರೂ, ಅಷ್ಟೇ ಖರ್ಚುಗಳೂ ಇರಲಿವೆ. ಹೊಸ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಎಚ್ಚರವಿರಲಿ.

ಮೀನ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ನೆಮ್ಮದಿ ಪಡೆಯುವಿರಿ. ಶುಭ ಮಂಗಲ ಕಾರ್ಯ ನೆರವೇರಿಸುವಿರಿ. ಖರ್ಚುವೆಚ್ಚಗಳು ವಿಪರೀತ ಆಗುತ್ತವೆ. ಎಲ್ಲದಕ್ಕೂ ಕಡಿವಾಣ ಅಗತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಪೂಜೆಗೆ ಒಡೆದ ತೆಂಗಿನಕಾಯಿ ಹಾಳಾದ್ರೆ ಶುಭನಾ? ಅಶುಭನಾ?