Select Your Language

Notifications

webdunia
webdunia
webdunia
webdunia

ಶ್ರದ್ಧೆಯಿಂದ ಮಾಡಿದರೆ ಈ ಎಲ್ಲಾ ಕಾರ್ಯಗಳ ಫಲ ನಮಗೆ ಸಿಗುವುದು

ಶ್ರದ್ಧೆಯಿಂದ ಮಾಡಿದರೆ ಈ ಎಲ್ಲಾ ಕಾರ್ಯಗಳ ಫಲ ನಮಗೆ ಸಿಗುವುದು
ಬೆಂಗಳೂರು , ಗುರುವಾರ, 4 ಏಪ್ರಿಲ್ 2019 (09:16 IST)
ಬೆಂಗಳೂರು: ಪ್ರಪಂಚದಲ್ಲಿರುವ ಸಕಲ ಚರಾಚರಗಳ ಅಸ್ತಿತ್ವವಿರುವುದು ಶ್ರದ್ಧೆಯಲ್ಲಿ. ಋಗ್ವೇದದ ಶ್ರದ್ಧಾ ಸೂಕ್ತ ಶ್ರದ್ಧೆಯ ಮಹತ್ವವನ್ನು ತಿಳಿಸುತ್ತದೆ.


ಪಂಚ ಭೂತಗಳ ಇರುವಿಕೆ ಇರುವುದು ಶ್ರದ್ಧೆಯಿಂದ. ಅಗ್ನಿ ಉರಿಯುವುದು ಶ್ರದ್ಧೆಯಿಂದ. ಅಗ್ನಿಗೆ ಹವಿಸ್ಸನ್ನು ಅರ್ಪಿಸುವುದು ಶ್ರದ್ಧೆಯಿಂದ. ಸೂರ್ಯ ಚಂದ್ರರು ಬೆಳಕು ನೀಡುವುದು ಶ್ರದ್ಧೆಯಿಂದ. ಮಳೆಯಾಗುವುದು ಶ್ರದ್ಧೆಯಿಂದ. ದಾನ ಧರ್ಮಗಳನ್ನು ಮಾಡಬೇಕಾದರೆ ಶ್ರದ್ಧೆಯಿಂದ ಮಾಡಿದರೆ ಮಾತ್ರರ ಅದರ ಫಲ ಸಿಗುವುದು.

ನಮಸ್ಕರಿಸುತ್ತಾ, ವಿಧೇಯಪೂರ್ವಕವಾಗಿ ಪ್ರಶ್ನೆಗಳನ್ನು ಕೇಳುತ್ತಾ, ಗುರುಗಳ ಸೇವೆ ಮಾಡುತ್ತಾ ಜ್ಞಾನ ಗಳಿಸಿದರೆ ಮಾತ್ರ ವಿದ್ಯೆ ಒಲಿದು ಬರುವುದು. ಶ್ರದ್ಧೆಯಿಲ್ಲದೇ ಜ್ಞಾನ ಪ್ರಾಪ್ತಿಯಾಗದು.ವಿದ್ಯೆಯಿಂದಲೇ ಮನುಷ್ಯನಿಗೆ ಅಮೃತ ಸಿಗುವುದು. ಹಾಗಾಗಿ ಪ್ರತಿಯೊಬ್ಬರೂ ಏನೇ ಮಾಡಬೇಕಾದರೂ ಶ್ರದ್ಧೆಯಿಂದ ಮಾಡುವುದು ಮುಖ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?