Publish Date: Mon, 21 Jan 2019 (09:00 IST)
Updated Date: Mon, 21 Jan 2019 (09:02 IST)
ಬೆಂಗಳೂರು: ಒಳ್ಳೆಯ ಉದ್ಯೋಗ, ಉತ್ತಮ ಜೀವನ ಎಲ್ಲರ ಕನಸು. ನೀವು ಮಾಡುವ ಉದ್ಯೋಗದಲ್ಲಿ ನಿರಾಶೆಯಾಗಿದೆಯೇ? ಅಥವಾ ಉತ್ತಮ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಅದಕ್ಕೆ ದೇವರ ಅನುಗ್ರಹವೂ ಮುಖ್ಯ.
ಉತ್ತಮ ಉದ್ಯೋಗ ಸಿಗಲು ಪ್ರತಿ ನಿತ್ಯ ನಿಮ್ಮ ಜಾತಕದಲ್ಲಿ ರವಿ ಗ್ರಹ ಪ್ರಬಲನಾಗಿರಬೇಕು. ಹೀಗಾಗಿ ಭಾನುವಾರದಿಂದ ತೊಡಗಿ ಪ್ರತೀ ದಿನ ಸೂರ್ಯನಿಗೆ ಜಲತರ್ಪಣ ಕೊಟ್ಟು ನಮಸ್ಕಾರ ಮಾಡಿ. ಸೂರ್ಯ ನಮಸ್ಕಾರ ಮಾಡುವಾಗ ಈ ಮಂತ್ರವನ್ನು 49 ಬಾರಿ ಹೇಳಿ. ಅದು ಹೀಗಿದೆ:
‘ಓಂ ನಮೋ ಭಗವತೇ ಸೂರ್ಯಾಯೈ ನಮಃ’
ಅದು ಸಾಧ್ಯವಾಗದಿದ್ದರೆ,
‘ಓಂ ನಮಃ ಸರ್ವರ್ಥ ಸಾಧಿನಿ ಸ್ವಾಹ’ ಎಂಬ ಮಂತ್ರವನ್ನು ಸಾವಿರ ಬಾರಿ ಜಪಿಸಿದರೆ ಬಯಸಿದ ಉದ್ಯೋಗ ಸಿಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ