ದೇವರ ಪ್ರಸಾದವನ್ನು ಯಾವ ದಿಕ್ಕಿಗೆ ಕೂತು ಸೇವಿಸಬೇಕು

Krishnaveni K
ಶುಕ್ರವಾರ, 18 ಅಕ್ಟೋಬರ್ 2024 (08:24 IST)
ಬೆಂಗಳೂರು: ಯಾವುದೇ ಪೂಜೆಯಿರಲಿ, ಹಬ್ಬ ಹರಿದಿನವಿರಲಿ, ಪೂಜೆ ಮಾಡಿದ ಮೇಲೆ ದೇವರ ಪ್ರಸಾದ ಸಿಕ್ಕೇ ಸಿಗುತ್ತದೆ. ದೇವರ ಪ್ರಸಾದವನ್ನು ಸ್ವೀಕರಿಸುವ ವಿಚಾರದಲ್ಲೂ ಕೆಲವೊಂದು ನಿಯಮ ಪಾಲಿಸಬೇಕು. ಏನು ಇಲ್ಲಿ ನೋಡಿ.

ದೇವರ ಪೂಜೆ ಮಾಡಿದಷ್ಟೇ ಭಕ್ತಿಯಿಂದ ದೇವರ ಪ್ರಸಾದವನ್ನೂ ಸ್ವೀಕರಿಸಬೇಕು. ಪ್ರಸಾದವನ್ನು ಸ್ವೀಕರಿಸುವಾಗ ಸರಿಯಾದ ಕ್ರಮದಲ್ಲಿ ಸ್ವೀಕರಿಸಿದರೆ ಅದರ ಫಲ ನಮಗೆ ಸಿಗುತ್ತದೆ. ಅದು ಮಂಗಳಕರವಾಗಿರುತ್ತದೆ. ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂಬ ನಂಬಿಕೆಯಿದೆ.

ದೇವರ ಪ್ರಸಾದ ಅತ್ಯಂತ ಪವಿತ್ರವಾಗಿದ್ದು ಅದನ್ನು ಕಣ್ಣಿಗೊತ್ತಿಕೊಂಡು ಸೇವಿಸಬೇಕು. ದೇವರ ಪ್ರಸಾದವನ್ನು ಸ್ವೀಕರಿಸುವಾಗ ಉತ್ತರ ಮತ್ತು ಪೂರ್ವ ದಿಕ್ಕಿಗೆ ಕೂತು ಸ್ವೀಕರಿಸಿದರೆ ಅತ್ಯಂತ ಶ್ರೇಯಸ್ಕರವಾಗಿರುತ್ತದೆ. ಈ ದಿಕ್ಕಿನಲ್ಲಿ ಕೂತು ಪ್ರಸಾದವನ್ನು ಸ್ವೀಕರಿಸುವುದರಿಂದ ಮನೆಯಲ್ಲಿ ಸಮೃದ್ಧಿಯುಂಟಾಗುತ್ತದೆ.

ಆದರೆ ದೇವರ ಪ್ರಸಾದವನ್ನು ಅಪ್ಪಿ ತಪ್ಪಿಯೂ ದಕ್ಷಿಣ ದಿಕ್ಕಿಗೆ ಕೂತು ಸ್ವೀಕರಿಸಬೇಡಿ. ದಕ್ಷಿಣ ದಿಕ್ಕು ಯಮನ ದಿಕ್ಕು. ದೇವರ ಪ್ರಸಾದವಾಗಲೀ, ಅನ್ನವಾಗಲೀ ದಕ್ಷಿಣ ದಿಕ್ಕಿಗೆ ಕೂತು ಸೇವಿಸುವುದರಿಂದ ಆಯಸ್ಸು ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಜೊತೆಗೆ ಮನೆಯಲ್ಲಿಯೂ ದುರಾದೃಷ್ಟ ತಾಂಡವವಾಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಮುಂದಿನ ಸುದ್ದಿ
Show comments